ಹೃದಯ ಹೂವಿನ ಹಂದರ, ವಚನ ಸಂಜೀವಿನಿ ಕವನ ಸಂಕಲನ ಲೋಕಾರ್ಪಣೆ :

ಹೃದಯ ಹೂವಿನ ಹಂದರ, ವಚನ ಸಂಜೀವಿನಿ ಕವನ ಸಂಕಲನ ಲೋಕಾರ್ಪಣೆ :





                  ಕಾವ್ಯಭಾರತಿ, ಪ್ರಕಾಶನ, ತಾಜಪೂರ (ಎಚ್) ಹಾಗೂ ಕನ್ನಡ ಉಪನ್ಯಾಸಕರ ಸಂಘ ವಿಜಯಪುರ ಇವರ ಸಹಯೋಗದಲ್ಲಿ ಪ್ರೊ.ಸಿದ್ದು ಸಾವಳಸಂಗ, ತಾಜಪುರ ಇವರ 'ಹೃದಯ ಹೂವಿನ ಹಂದರ' ಹನಿಗವನಗಳ ಸಂಕಲನ ಹಾಗೂ ವಚನ ಸಂಜೀವಿನಿ ' ಆಧುನಿಕ ವಚನಗಳ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ರವಿವಾರ ದಿನಾಂಕ 05-03-2023 ರಂದು ಬೆಳಿಗ್ಗೆ 10-00 ಗಂಟೆಗೆ ಶಾರದಾ ಸಭಾಭವನ, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು ವಿಜಯಪುರದಲ್ಲಿ ಜರುಗಲಿದೆ.

                 ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್.ಎನ್ ಬಗಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಾಲಿಕೆಯರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಬಿ ನಾಟಿಕಾರ ಅಧ್ಯಕ್ಷತೆ ವಹಿಸುವರು. ಕನ್ನಡ ಉಪನ್ಯಾಸಕರ ಸಂಘ ಹಾಗೂ ಪ್ರಾಂಶುಪಾಲರು ಸ.ಪ.ಪೂ ಕಾಲೇಜ ಕೂಡಗಿ ಅಧ್ಯಕ್ಷರು ಕೆ.ಜಿ. ಲಮಾಣಿ ಕೃತಿಗಳ ಲೋಕಾರ್ಪಣೆ ಮಾರುವರು. ಸಿಕ್ಯಾಬ ಮಹಿಳಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರು ಹಾಗು ಹಿರಿಯ ಸಾಹಿತಿಗಳು ಪ್ರೊ.ಯು.ಎನ್ ಕುಂಟೋಜಿ ಕೃತಿಗಳ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರು ಡಾ.ಎ.ಎಚ್.ಕುಲಕೆರ್ನಿ, ಕಗ್ಗೋಡ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಕೆ.ಎ ಉಪ್ಪಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಮಹಾದೇವ ರಾಬಿನಾಳ, ಹುನಗುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಸಿದ್ಧಲಿಂಗಪ್ಪ ಬೀಳಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಶಾಖಾಧಿಕಾರಿಗಳು ಬಿ.ಟಿ ಗೊಂಗಡಿ ಭಾಗವಹಿಸಲಿದ್ದಾರೆ ಎಂದು ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ.ಸಿದ್ದು ಸಾವಳಸಂಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು