ಜೂನ್ 22 ರಂದು ಸ್ತಬ್ಧವಾಗಲಿದೆ ಕರುನಾಡು ..

ಜೂನ್ 22 ರಂದು ಸ್ತಬ್ಧವಾಗಲಿದೆ ಕರುನಾಡು ..


ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್ ಗೆ ಕರೆ ಕೊಟ್ಟಿದೆ. 




ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕೆಂದು KCCI ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿತ್ತು. ಗಡುವು ಮುಕ್ತಾಯವಾದ ಹಿನ್ನೆಲೆ ಬಂದ್ ಗೆ ಕರೆ ಕೊಡಲಾಗಿದೆ.

ಇದೆ ವೇಳೆ ಬೆಲೆ ಇಳಿಕೆ ಮಾಡದಿದ್ರೆ ಎಲ್ಲಾ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಗಿತ್ತು.

ವಿದ್ಯುತ್ ದರ ಇಳಿಕೆಯಾಗದ ಹಿನ್ನಲೆಯಲ್ಲಿ ಜೂನ್ 22 ರಂದು ಒಂದು ದಿನ ಬಂದ್ ಗೆ ಕರೆ ನೀಡಲಾಗಿದೆ.

KCCI ಎಚ್ಚರಿಕೆ ನೀಡಿದ್ರೂ ರಾಜ್ಯ ಸರ್ಕಾರ ಯಾವುದೇ ಚರ್ಚೆ ನಡೆಸದ ಹಿನ್ನಲೆಯಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್  ನಿರ್ಧಾರ ತೆಗೆದುಕೊಂಡಿದ



ಇದೀಗ ಜೂನ್ 22ಕ್ಕೆ ಚೇಂಬರ್ಸ್ ಆಫ್ ಕಾಮರ್ಸ್ 'ಕರ್ನಾಟಕ ಬಂದ್ ಗೆ ಕರೆ ನೀಡಿದೆ! ಒಂದು ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ್ ಒಂದು ತಿಂಗಳೊಳಗೆ ಅದೇ ಸರ್ಕಾರದ ವಿರುದ್ಧ ರಾಜ್ಯ ಬಂದ್ ಗೆ ಕರೆ ಬಂದಿರುವುದು ದೇಶದಲ್ಲೇ ಇದೆ ಮೊದಲು ಎಂದು ಬಿಜೆಪಿ ವಾಗ್ದಾಳಿ ನಡೆದಿದೆ.

ಮಾನ್ಯ ಸಿದ್ಧರಾಮಯ್ಯರವೆರೆ, ಬಂದ್ ಆಗುವವರೆಗೂ ಕಾದು ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರೋ ಅಥವಾ ಮೊದಲೇ ಪರಿಹಾರ ಕೈಗೊಳ್ಳುತ್ತಿರೋ ಅಥವಾ, ಇದಕ್ಕೂ ಕಲೆಕ್ಷನ್ ಏಜೆಂಟ್ ಸುರ್ಜೆವಾಲಾ ಅವರ ಪರ್ಮಿಷನ್ ಬೇಕೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. 

ಆದರೆ ಈವರೆಗೂ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು