Aswhini Puneethrajkumar: ಅಪ್ಪು ಅವರ ಕೊನೆಯ ಆಸೆಯನ್ನು ತೀರಿಸಲು ಹೊರಟ ಪತ್ನಿ ಅಶ್ವಿನಿ. ಆ ಆಸೆ ಏನಾಗಿತ್ತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪುನೀತ್ ಹುಟ್ಟುಹಬ್ಬಕ್ಕೆ ಮುನ್ನವೇ ಪತ್ನಿ ಅಶ್ವಿನಿಯ ಗಟ್ಟಿ ನಿರ್ಧಾರ 



ಅಪ್ಪು ಆಕಾಶ ಸೇರಿ ವರುಷವೇ ಕಳೆದಿದೆ. ಆದರೆ, ಅಭಿಮಾನಿಗಳು ತಮ್ಮ ಮನದಂಗಳದಲ್ಲಿ ಅವರನ್ನು ಇನ್ನು ಜೀವಂತವಾಗಿರಿಸಿದ್ದಾರೆ. ಈ ಅಭಿಮಾನಿಗಳು ಅಪ್ಪು ಜನ್ಮ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಬೇಕಾದ ಸಕಲ ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ.

ಮಾರ್ಚ್ 17 ದೊಡ್ಮನೆ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ದಿನ. ಪ್ರತಿ ವರ್ಷ ಈ ದಿನವನ್ನು ಪ್ರೀತಿಯ ಅಪ್ಪು ಜೊತೆ ಸೆಲೆಬ್ರೇಶನ್ ಮಾಡುತ್ತಿದ್ದ ಪುನೀತ್ ಅಭಿಮಾನಿಗಳು ಇದೀಗ ಅಪ್ಪು ಅನುಪಸ್ಥಿತಿಯಲ್ಲಿಯೇ ಅವರ ಹುಟ್ಟಿದ ದಿನವನ್ನು ಆಚರಿಸುವಂತಾಗಿದೆ. ಅದೇ ರೀತಿ ಈ ವರ್ಷ ಅಪ್ಪು ಜನ್ಮ ದಿನವನ್ನು ಆಚರಿಸಲು ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಇಂಥ ಟೈಮ್ ನಲ್ಲಿ ಅಪ್ಪು ಮಡದಿ ಅಶ್ವಿನಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಏನದು ನಿರ್ಧಾರ ???

ಅಪ್ಪು ಹುಟ್ಟು ಹಬ್ಬಕ್ಕೆ ಸಾವಿರಾರು ಅಭಿಮಾನಿಗಳು ಮನೆ ಬಳಿ ಬರುತ್ತಾರೆ. ಅಭಿಮಾನಿಗಳ ಆ ಪ್ರೀತಿ ಅಪ್ಪು ನೆನಪು ಮತ್ತಷ್ಟು ಕಾಡುವಂತೆ  ಮಾಡುತ್ತದೆ.ಈ ಹಿನ್ನಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ ಇಂದು ವಿದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 19 ಕ್ಕೆ ವಾಪಸ್ಸಾಗಲಿದ್ದಾರೆ.

ಈ ನಿರ್ಧಾರಕ್ಕೆ ಕಾರಣವೇನು?

ಮಾರ್ಚ್ 17 ಬಂತು ಅಂದ್ರೆ ಸಾಕು ಸದಾಶಿವನಗರದ ಮನೆಯಲ್ಲಿ ಜನ ಜಂಗುಳಿ ಸೇರುತ್ತಿತ್ತು. ಅಲ್ಲಿ  ಸಂತೋಷ ಸಡಗರ ಮೈಸೆಳೆಯುತ್ತಿತ್ತು. ಆದರೆ ಈ ಬಾರಿ ಹಾಗಾಗವುದಿಲ್ಲ. ಏಕೆಂದರೆ ದೂರದ ಊರುಗಳಿಂದ ಬಂಡ ಅಭಿಮಾನಿಗಳ ಸಂತೋಷ ಇಮ್ಮಡಿಗೊಳಿಸಲು ಅಲ್ಲಿ ಅಪ್ಪು ಇಲ್ಲ. ಇರುವುದು ಬರೀ ಅವರ ನೆನಪಷ್ಟೇ. ಹಾಗಂತ ಅಪ್ಪು ಜನ್ಮದಿನದಂದು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಅಪ್ಪು ಹುಟ್ಟು ಹಬ್ಬಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ಅಶ್ವಿನಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಅಪ್ಪು ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನ ಮನೆ ಬಳಿ ಬರಬೇಡಿ ಅಂದವರಲ್ಲ. ಹೀಗಿರುವಾಗ ಅವರ ಅಗಲಿಕೆ ನಂತರ ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಆಗದೆ ಅಪ್ಪು ಹುಟ್ಟು ಹಬ್ಬಕ್ಕೂ ಮುನ್ನ ವಿದೇಶದಲ್ಲಿರುವ ಮಗಳ ಬಳಿ ಹೊರಟಿದ್ದಾರೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು