ನಾನು ತೀರಿ ಹೋದ ಮೇಲೆ ನನ್ನ ದೇಹ ನೋಡಲು ಬನ್ನಿ. ಇಲ್ಲ ಅಂದ್ರೆ ದೆವ್ವ ಆಗಿ ಬರ್ತೀನಿ ಅಂತ ಹೇಳಿ ಜೀವ ಕಳೆದುಕೊಂಡ ಆಕೆ! ಪತ್ರದಲ್ಲಿ ಏನು ಬರೆದಿದ್ದಳು ಗೊತ್ತಾ?

ನಾನು ತೀರಿ ಹೋದ ಮೇಲೆ ನನ್ನ ದೇಹ ನೋಡಲು ಬನ್ನಿ. ಇಲ್ಲ ಅಂದ್ರೆ ದೆವ್ವ ಆಗಿ ಬರ್ತೀನಿ ಅಂತ ಹೇಳಿ ಜೀವ ಕಳೆದುಕೊಂಡ ಆಕೆ! ಪತ್ರದಲ್ಲಿ ಏನು ಬರೆದಿದ್ದಳು ಗೊತ್ತಾ?


ನಮ್ಮದೇ ರಾಜ್ಯದ ರಾಯಚೂರಿನಲ್ಲಿ ನಡೆದಿರುವ ಘಟನೆ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದೆ. 16 ವರ್ಷ ವಯಸ್ಸಿನ ಸಾರಿಕ ಎನ್ನುವ ಹುಡುಗಿ ಗಣೇಶೋತ್ಸವ ಕಾರ್ಯಕ್ರಮದ ಗಣಪತಿ ವಿಸರ್ಜನೆಗಾಗಿ ತಯಾರಾಗಿದ್ದ ಕೆರೆಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಈಗ ಎಲ್ಲರ ಕಣ್ಣಂಚಿನಲ್ಲಿ ನೀರನ್ನು ತರಿಸುತ್ತದೆ. ಅಷ್ಟಕ್ಕೂ ಏನು ನಡೆದಿತ್ತು ಹಾಗೂ ಮರಣ ಹೊಂದುವುದಕ್ಕಿಂತ ಮುಂಚೆ ಆಕೆ ಪತ್ರದಲ್ಲಿ ಏನು ಬರೆದಿದ್ದಳು ಎನ್ನುವ ಕುರಿತಂತೆ ಈಗ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.

ಮೇದಾರ ಹಾಗೂ ಮಾಲಿ-ಮಾಲಗಾರ್ ಹಾಗೂ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರದಿಂದ ಆದೇಶ

ಹೌದು ಮಿತ್ರರೇ ಸಾರಿಕಾ, ತನ್ನ ಪ್ರಾಣವನ್ನು ಕಳೆದುಕೊಳ್ಳುವ ಮುನ್ನ ಪತ್ರದಲ್ಲಿ ತನ್ನ ಕೊನೆಯ ಆಸೆಯನ್ನು ಕೂಡ ಬರೆದುಕೊಂಡಿದ್ದಳಂತೆ ಎಂಬುದಾಗಿ ಈಗ ತಿಳಿದು ಬಂದಿದೆ. ಈ ಘಟನೆ ನಡೆದಿರುವುದು ರಾಯಚೂರು ಜಿಲ್ಲೆಯ ಸಿಂಧೂರಿನಲ್ಲಿ. ನಾಲ್ಕು ಪುಟಗಳ ಪತ್ರ ಸಿಕ್ಕಿದರು ಕೂಡ ಸಾರಿಕಾ ತನ್ನ ಜೀವನವನ್ನು ತಾನೇ ಮುಗಿಸಿಕೊಳ್ಳುವುದಕ್ಕೆ ನಿಜವಾದ ಕಾರಣ ಏನು ಎಂಬುದು ನಿಖರವಾಗಿ ಇನ್ನು ಕೂಡ ತನಿಖೆಯಲ್ಲಿ ತಿಳಿದು ಬಂದಿಲ್ಲ.

ಇನ್ನು ಆ ಪತ್ರದಲ್ಲಿ ಕೂಡ ಇದರ ಕುರಿತಂತೆ ಯಾವುದೇ ಉಲ್ಲೇಖವಾಗಿಲ್ಲ ಎನ್ನುವುದು ಮತ್ತೊಂದು ತಲೆಕೆಡಿಸಿಕೊಳ್ಳುವ ವಿಚಾರವಾಗಿದೆ. ಇನ್ನು ಆ ಪತ್ರದಲ್ಲಿ ಸಾರಿಕಾ ನನ್ನನ್ನು ಕೊನಯ ಬಾರಿಗೆ ನೋಡೋದಕ್ಕೆ ಎಲ್ಲರು ಕೂಡ ಬನ್ನಿ ಇಲ್ಲದಿದ್ದರೆ, ನಾನು ದೆವ್ವ ಆಗಿ ಬರ್ತೀನಿ ಎನ್ನುವುದಾಗಿ ಬರೆದುಕೊಂಡಿದ್ದಾಳೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಇಂತಹ ದುಡುಕಿನ ನಿರ್ಧಾರವನ್ನು ಯಾಕೆ ಆ ಹುಡುಗಿ ತೆಗೆದುಕೊಂಡಳು ಎಂಬುದು ನಿಜಕ್ಕೂ ಕೂಡ ಯಕ್ಷ ಪ್ರಶ್ನೆಯಾಗಿದೆ.

HDFC ಖಾತೆದಾರರೇ ಎಚ್ಚರಿಕೆ! ಬ್ಯಾಂಕ್ ಖಾತೆದಾರರ ಮಾಹಿತಿ ಸೋರಿಕೆ??????

ಈಗಾಗಲೇ ಸಿಂಧೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪೋಲೀಸರ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇಂದಿನ ಮಕ್ಕಳ ಮನಸ್ಥಿತಿ ಕೂಡ ಸಾಕಷ್ಟು ಸೂಕ್ಷ್ಮವಾಗಿದ್ದು ಸ್ವಲ್ಪ ಮಟ್ಟಿಗೆ ಕಷ್ಟ ಅಥವಾ ದುಃಖ ತರಿಸುವ ವಿಚಾರಗಳನ್ನು ಅವರಿಗೆ ತಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಆದರೆ ಈ ಪ್ರಕರಣದ ಹಿಂದಿನ ನಿಜವಾದ ರಹಸ್ಯ ಏನು ಎಂಬುದು ತನಿಖೆಯಲ್ಲಿ ಇನ್ನಷ್ಟು ತಿಳಿದು ಬರಬೇಕಾಗಿದೆ.





























  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು