ಕಿರಿಕ್ ಕೀರ್ತಿ ತಮಟೆ ಡೈಲಾಗ್ ವೈರಲ್ !!!!!

ಸತ್ತು ಹೋಗಿದ್ದೀನಿ ಅಂತ ತಮಟೆ ಹೊಡೀತಾರೆ, ನನ್ನ ಹೆಣಕ್ಕೆ ನಾನೆ ತಮಟೆ ಹೊಡೀಬಾರ್ದು :



ಕಿರಿಕ್ ಕೀರ್ತಿ ತಮಟೆ ಡೈಲಾಗ್ ಸೋಷಿಯಲ್ ಮಿಡಿಯಾದಲ್ಲಿ  ವೈರಲ್ :

   ನಾಲ್ಕು ಚಕ್ರ ಕಾರು ಕೊಟ್ಟಿರುವ ದೇವರು ನಾಲ್ಕು ರಿಂಗ್ ತಂದು ಮುಂದೆ ಇಡಲ್ವಾ?
ಬಿಗ್ ಬಾಸ್ ಸ್ಪರ್ಧಿ ಸೋಷಿಯಲ್ ಮೀಡಿಯಾ ಸ್ಟಾರ್ ಕಿರಿಕ್ ಕೀರ್ತಿ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆ ಖಾಸಗಿ ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳು ಟ್ರೊಲ್ ಮತ್ತು ಮೀಮ್ಸ್ ಪೇಜ್ ಗಳಲ್ಲಿ ವೈರಲ್ ಆಗುತ್ತಿದೆ. ಯಾವ ವಿಚಾರಕ್ಕೆ ಕೀರ್ತಿ ಈ ರೀತಿ ಹೇಳಿಕೆ ಕೊಟ್ರು???

ಕಿರಿಕಾ ಕೀರ್ತಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಆಗಿದ್ದು ಹೆಂಡತಿ ಬಿಟ್ಟು ಹೋಗಿದ್ದಾರೆ, ಇಬ್ರು ಡಿವೋರ್ಸ್ ಮಾಡಿಕೊಂಡಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಸಾಕಷ್ಟು ರೀತಿಯಲ್ಲಿ ಕೀರ್ತಿ ಸ್ಪಷ್ಟನೆ ಕೊಟ್ಟರೂ ಕೆಲವರು ಸೋಷಿಯಲ್ ಮಿಡಿಯಾ ಹುಳುಗಳು ಬೇಕೆಂದು ಗಾಸಿಪ್ ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಕಿರಿಕ್ ಕೀರ್ತಿ ಸ್ಪಷ್ಟನೆ ಏನು?


ನಾನು ೧೦೦% ಗ್ರೇಟ್ ಅಲ್ಲ ಅಂದಿದ್ಯಾಕೆ ?

ನನ್ನ ಎಲ್ಲಾ ಸ್ನೇಹಿತರ ಜೊತೆ ಮಾತನಾಡುತ್ತಿಲ್ಲ ನನ್ನ ಎಲ್ಲಾ ಸ್ನೇಹಿತರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿಲ್ಲ. ನಮ್ಮ ಸಾವಿನ ತಮಟೆಯನ್ನು ನಾವೇ ಹೊಡೆದುಕೊಳ್ಳಬಾರದು. ಅದಕ್ಕೆ ಬೇರೆ ಅರ್ಥ ಬರುತ್ತೆ. ನಮ್ಮ ಹೆಣ ಎತ್ಕೊಂಡು ಹೋಗುವಾಗ ನಾವೇ ಬಂದು ತಮಟೆ ಹೊಡೀಬಾರ್ದು. ನಾವು ಸೈಲೆಂಟ್ ಆಗಿರಬೇಕು ಹೊಡೆಯುವವರು ಎಷ್ಟು ಬೇಕಿದ್ದರೂ ತಮಟೆ ಹೊಡೆದುಕೊಳ್ಳಲಿ. ತಮಟೆ ಹರಿದು ಹೋಗಬೇಕು. ಇಲ್ಲವೇ ನಿನ್ನ ಕೈ ನೋವು ಬರಬೇಕು. ಅಷ್ಟೇ ಅಲ್ವ? ಜೋರಾಗಿ ಹೊಡಿ ತಮಟೆ ಈಗ ನಾನು ನೆಮ್ಮದಿಯಾಗಿ ಮಲಗಿಕೊಂಡಿರುವೆ ನೆಮ್ಮದಿಯಾಗಿ ಎಂಜಾಯ್ ಮಾಡುತ್ತಿರುವೆ ಅಷ್ಟೇ. ಅವನು ಸತ್ತಿದ್ದಾನೆ ಎಂದು ತಮಟೆ ಹೊಡೆದರೇನೇ ಅವನು ಎಚ್ಚರಿಕೆ ಆಗುವುದು. ಸತ್ತಿದ್ದಾನೆ. ಎಂದು ತಮಟೆ  ಹೊಡೆಯುತ್ತಾರೆ ಆದರೆ ನ್ನವು ಅದೇ ಸೌಂಡ್ ಗೆ ಎಚ್ಚರವಾಗುತ್ತಿರುವುದು ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.

ಘಟನೆಯಿಂದ ಹೊರ ಬರಲು ಔಷಧಿ ತೆಗೆದುಕೊಂಡ ಇರಿಕ್ ಕೀರ್ತಿ :

 ನನ್ನ  ತಂದೆ ತಾಯಿ ಚೆನ್ನಾಗಿದ್ದರೆ ಆರಾಮ ಆಗಿದ್ದರೆ. ನಾನು Go with the flow ವ್ಯಕ್ತಿ. ತುಂಬಾ ಲೆಕ್ಕಾಚಾರ ಹಾಕಿ ಜೀವನ  ನಡೆಸುವುದಿಲ್ಲ. ಎಲ್ಲ ದೇವರ ನಿರ್ಧಾರ ಯಾರು ನೋಡಿಲ್ಲ ಲೆಕ್ಕ ಮಾಡಿಲ್ಲ ಅಂದ್ರು ದೇವರು ನೋಡುತ್ತಾರೆ ನಿರ್ಧಾರ ಮಾಡುತ್ತಾರೆ. ನಾನೆ ಸರಿ ಎಂದು ಜಗಳ ಮಾಡಿ ಪೊಲೀಸ್ ಸ್ಟೇಷನ್ ನಲ್ಲಿ ಫೈಟ್ ಮಾಡು, ಕೋರ್ಟ್ ನಲ್ಲಿ ಫೈಟ್ ಮಾಡು ಏನು ಬೇಕಿದ್ದರೂ ಮಾಡಿ ಆದರೆ ದೇವರ ಮುಂದೆ ಫೈಟ್ ಮಾಡಲು ಆಗುತ್ತಾ? ಒಳ್ಳೆ ಸಿನೆಮಾ - ಒಳ್ಳೆ ಕಾರ್ಯಕ್ರಮಗಳ ಮೂಲಕ ಮತ್ತೆ ಕಾಮ್ ಬ್ಯಾಕ್ ಮಾಡುತ್ತೇನೆ. ಸಾವಿರಾರು ಯೋಚನೆಗಳಿವೆ. ಸದ್ಯಕ್ಕೆ ವಿವಿಧ ಕ್ಷೇತ್ರದಲ್ಲಿರುವ ಸಾಕಷ್ಟು ಸ್ನೇಹಿತರು ನನ್ನ ಜೊತೆ ನಿಂತಿದ್ದಾರೆ. ಈ ಘಟನೆ ಎದುರಿಸಿದ ನಂತರ ನನ್ನ ಶಕ್ತಿ ನನ್ನ ಗುಂಪು ಅರ್ಥವಾಗಿದೆ. ನೆಗೆಟಿವ್ ಆಗುತ್ತಿದ್ದಂತೆ ಪಾಸಿಟಿವ್  ಕೂಡ ಅವರ ಹಿಂದೆ ಬರುತ್ತದೆ. ಪಾಸಿಟಿವ್ ಜನರು ಪಾಸಿಟಿವ್ ಜೀವನ ಪಾಲಿಸುತ್ತಿರುವ ಕಾರಣ ಯಾರಿಗೂ ಹೆದರಿಕೊಳ್ಳುವುದಿಲ್ಲ, ಬೆದರಿಕೊಳ್ಳುವುದಿಲ್ಲ, ಕುಗ್ಗುವುದಿಲ್ಲ, ಯಾರಿಗೂ ಭಯ ಪಡುವುದಿಲ್ಲ ..ನಂಗೆ ಗೊತ್ತು ಕರೆಕ್ಟ್ ಆಗಿ ಬದುಕಿದ್ದೀನಿ, ಕರೆಕ್ಟ್ ಆಗಿ ಬದುಕುತ್ತೇನೆ. ಹಾಗೂ ಮುಂದಕ್ಕೂ ಜೀವನ ನಡೆಸುತ್ತೀನಿ ಎಂದು ಕಿರಿಕ್ ಕೀರ್ತಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.


ಆ ನಾಲ್ಕು ವ್ಯಕ್ತಿಗಳಿಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತದೆ: ವದಂತಿಗಳಿಗೆ ಬ್ರೇಕ್ ಹಾಕಿದ ಕೀರ್ತಿ :

 "ನಾನು ಇಂಡಸ್ಟ್ರಿಯಲ್ಲಿ ಇದ್ದೀನಿ ಇಂಡಸ್ಟ್ರಿಯಲ್ಲೇ ಇರ್ತೀನಿ ಇಲ್ಲೇ ಬದುಕುತ್ತೀನಿ ಇಲ್ಲೇ ಸಾಧನೆ ಮಾಡುತ್ತೀನಿ. ಇಲ್ಲೇ  ಸಾಯುತ್ತೀನಿ.ಏನೂ ಇಲ್ಲದೆ ಇಲ್ಲಿ ತನಕ ಬಂದಿರುವವನು ನಾನು... ಇಲ್ಲಿ ತನಕ ಬಂದವನು ಮುಂದಕ್ಕೆ ಹೋಗಲ್ವಾ ? ೪೦೦ ರೂಪಾಯಿ ಇಟಗೊಂಡು ನಾಲ್ಕು ಚಕ್ರ ಕೆಂಪು ಬಸ್ ನಲ್ಲಿ ಓಡಾಡುತ್ತಿದ್ದವನನ್ನು ದೇವರು ನಾಲ್ಕು ಚಕ್ರ ಕಾರಿನಲ್ಲಿ ಪ್ರಯಾಣ ಮಾಡಲು ತಂದು ಬಿಟ್ಟಿದ್ದಾನೆ. ನಾಲ್ಕು ಚಕ್ರ ಕೊಟ್ಟಿರುವ ದೇವರು ಕಾರಿನ ಮುಂದೆ ನಾಲ್ಕು ರಿಂಗ್ ಕೊಡಲ್ವಾ ? ಸಾಧನೆ ಮಾಡೇ ಮಾಡುತ್ತೀನಿ ಎಂದಿದ್ದಾರೆ ಕೀರ್ತಿ...........



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು