5 ಕೆಜಿ ಅಕ್ಕಿ ಬದಲು ಹಣಭಾಗ್ಯ 3ನೇ ಗ್ಯಾರಂಟಿ ಇಂದು ಆರಂಭ

5 ಕೆಜಿ ಅಕ್ಕಿ ಬದಲು ಹಣಭಾಗ್ಯ 3ನೇ ಗ್ಯಾರಂಟಿ ಇಂದು ಆರಂಭ 

ಅನ್ನಭಾಗ್ಯ ದಡಿ ಹಣ ವರ್ಗಕ್ಕೆ ಸಿಎಂ ಚಾಲನೆ ಪಡಿತರಾದಾರರಿಗೆ ತಲಾ 170 ರೂ ಸಂದಾಯ //

  

             ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆಗೆ ಹಣ ವರ್ಗಾವಣೆ ಮೂಲಕ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. 

ಅನ್ನಭಾಗ್ಯ ಯೋಜನೆ ಅಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ (5 ಕೆಜಿ ಅಕ್ಕಿ ದರ) ತಿಂಗಳಿಗೆ 170 ರೂ ಗಳಂತೆ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಕುರಿತು ಸಮಾರಂಭ ನಡೆಯಲಿದೆ.
      ನಗದು ರೂಪದಲ್ಲಿ ಇರದೇ, ಹಣವು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಆಗುತ್ತದೆ. ಅಂತ್ಯೋದಯ ಅಣ್ಣ ಯೋಜನೆ (ಎಎವೈ), ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಕುಟುಂಬದ ಮುಖ್ಯಸ್ಥರ ಖಾತೆಗಳ ಮಾಹಿತಿಯನ್ನು ಈಗಾಗಲೇ ಪಡೆಯಲಾಗಿದೆ.ಸೋಮವಾರದಿಂದ ಜುಲೈ ತಿಂಗಳ ಕಂತಿನ ಹಣವನ್ನು ವರ್ಗಾಯಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

ಏನಿದು ಯೋಜನೆ?

ಬಿಪಿಎಲ್ ಪಡಿತರಾದಾರರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡಿತ್ತು. ಅಕ್ಕಿ ಹೊಂದಿಸಲಾಗದ ಕರಣ ಕೆಜಿ ಗೆ 34 ರೂ ನಂತೆ 5 ಕೆಜಿ ಅಕ್ಕಿಯ ಬೆಳೆಯನ್ನು ಪಡಿತದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದೆ.

ಯಾರಿಗೆ ಸಿಗುತ್ತೆ?

✅ ಬಿಪಿಎಲ್ 4 ಕ್ಕಿಂತ ಹೆಚ್ಚು ಜನರಿರುವ ಅಂತ್ಯೋದಯ ಕುಟುಂಬಗಳು 

✅ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಸೂಚಿಸಿದವರು 

✅ ಆಧಾರ್ ಲಿಂಕ್ ಮಾಡಿಸಿ ಸಕ್ರಿಯ ಬ್ಯಾಂಕ್ ಲಿಂಕ್ ಮಾಡಿಸಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರುವರು.

ಯಾರಿಗಿಲ್ಲ?

⭐ಎಪಿಎಲ್, 3ಕ್ಕಿಂತ ಕಮ್ಮಿ ಜನರಿರುವ ಅಂತ್ಯೋದಯ ಕಾರ್ಡುದಾರರು 

⭐ಕಳೆದ 3 ತಿಂಗಳಿಂದ ಪಡಿತರ ಅಂಗಡಿಯಿಂದ ಧನ್ಯ ಪಡೆಯದವರು 

⭐ಕುಟುಂಬದ ಮುಖ್ಯಸ್ಥರ ಸೂಚಿಸಿದವರು 1+ ಮುಖ್ಯಸ್ಥರಿರುವವರು 


ಹೆಚ್ಚುವರಿ ಅಕ್ಕಿ ಸಿಗುವವರೆಗೆ ಮಾತ್ರ ಹಣ ವರ್ಗಾವಣೆ ನಡೆಯಲಿದೆ ಎಂದು ಇತ್ತೀಚಿಗೆ ಸರ್ಕಾರ ಸ್ಪಷ್ಟಪಡಿಸಿತ್ತು.
ಕಾಂಗ್ರೆಸ್ಸಿನ 5 ಗ್ಯಾರಂಟಿ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಹಾಗೂ ಗೃಹಾಜ್ಯೋತಿ ಯೋಜನೆಗಳು ಈಗಾಗಲೇ ಪ್ರಾರಂಭವಾಗಿವೆ.
ಶೇ 82 ರಷ್ಟು ಮಂದಿ ತಕ್ಷಣ ಅರ್ಹ : ಒಟ್ಟು ಬಿಪಿಎಲ್, ಎಎವೈ ಕಾರ್ಡ್ ಸಂಖ್ಯೆ 1,28,16,253 (1.28 ಕೋಟಿ). ಈ ಪೈಕಿ ಆಧಾರ್ ಲಿಂಕ್ ಆಗಿರುವ ಕಾರ್ಡ್1.28,13,048 (ಶೇ 99) ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಕಾರ್ಡ್ 1.06(ಶೇ 82) ಕೋಟಿಯಷ್ಟಿವೆ. ಈ ಶೇ 82 ಮಂದಿಗೆ ತಕ್ಷಣ ನಗದು ವರ್ಗಾವಣೆಯಾಗಲಿದೆ. ಉಳಿದಂತೆ 22 ಲಕ್ಷ (ಶೇ 18 ಪಡಿತರ ಚೀಟಿಗಳಿಗೆ ಲಿಂಕ್ ಆದ ತಕ್ಷಣ ಹಣ ವರ್ಗಾವಣೆ ಮಾಡಲಾಗುವುದು.

ಇನ್ನು ಆಧಾರ್ ಲಿಂಕ್ ಬಾಕಿ ಇರುವ ಕಾರ್ಡ್ 3.016 ಮಾತ್ರ ಇದೆ. ಆಧಾರ್ ಇ-ಕೆವೈಸಿ ಮಾಡಿಸದಿದ್ದರೆ ಇಂತಹವರು ಆಹಾರ ಧನ್ಯ ಹಾಗೂ ನೇರ ನಗದು ವರ್ಗಾವಣೆ ಎರಡಕ್ಕೂ ಅರ್ಹರಾಗುವುದಿಲ್ಲ. ಹೀಗಾಗಿ ತಕ್ಷಣ ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೇ 94 ರಷ್ಟು ಹಣ ಮಹಿಳೆಯರ ಖಾತೆಗೆ :
ಕುಟುಂಬದ ಮುಖ್ಯಸ್ಥರ ಪೈಕಿ ಶೇ 94 ರಷ್ಟು ಮಹಿಳೆಯರು ಶೇ ೫5ರಷ್ಟು ಪುರುಷರು ಇದ್ದಾರೆ. ಈ ಮುಖ್ಯಸ್ಥರ ಖಾತೆಗೆ ೫ ಕೆಜಿ ಅಕ್ಕಿ ಬದಲಿಗೆ ಪ್ರತಿ ಫಲಾನುಭವಿಗೆ ಪ್ರತಿ ಕೆಜಿಗೆ ೩೪ ರೂಗಳಂತೆ 170 ರೂ ಹಣ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಆಗಲಿದೆ.

ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ನಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ಸದಸ್ಯರಿದ್ದರೆ ಅವರಿಗೆ ಈಗಾಗಲೇ ಪ್ರತಿ ತಿಂಗಳು ೩೫ ಕೆಜಿ ಆಹಾರಧಾನ್ಯ ನೀಡುತ್ತಿರುವುದರಿಂದ ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯ ನೀಡಲಾಗುವುದಿಲ್ಲ.

ಇನ್ನು ಅಂತ್ಯೋದಯ ಕಾರ್ಡ್ ನ ಕುಟುಂಬದಲ್ಲಿ 4 ಜನ ಸದಸ್ಯರಿದ್ದರೆ 175 ರೂ 5 ಸದಸ್ಯರಿದ್ದಾರೆ, 510 ರೂ    6 ಮಂದಿ ಸದಸ್ಯರಿದ್ದರೆ 850 ರೂ ನೀಡಲಾಗುವುದು. ಹೆಚ್ಚಿನ ಸದಸ್ಯರಿದ್ದರೆ ಇದೆ ಅನುಪಾತ ಮುಂದುವರೆಯಲಿದೆ ಎಂದು ಆಹಾರ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. 

    ಕುಟುಂಬದಲ್ಲಿ ಮುಖ್ಯಸ್ಥರನ್ನು ಗುರುತಿಸಿ ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯಕ್ಕೆ ಅರ್ಹವಾಗಲಿವೆ. ಕಳೆದ ಮೂರೂ ತಿಂಗಳಲ್ಲಿ ಪಡಿತರ ಚೀಟಿಯಲ್ಲಿ ಮುಖ್ಯಸ್ಥರನ್ನು ಸೂಚಿಸಿದ ಅಥವಾ ಒಂದಕ್ಕಿಂತ ಹೆಚ್ಚು ಮಂದಿ ಮುಖ್ಯಸ್ಥರನ್ನು ತೋರಿಸಿರುವವರನ್ನು ಸೌಲಭ್ಯದಿಂದ ಹೊರಗಿಡಲಾಗಿದೆ. ಅವರು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು