ರದ್ದಾದ ವಿಮಾನ ಸಂಚಾರ ಪುನರಾರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ:

ರದ್ದಾದ ವಿಮಾನ ಸಂಚಾರ ಪುನರಾರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ:



      ಉಡಾನ್ ಯೋಜನೆ ಅಡಿ 13ಮಾರ್ಗಗಳಿಗೆ ಬೆಳಗಾವಿಯಿಂದ ದೇಶದ ವಿವಿಧ ನಗರಗಳ ನಡುವೆ ವಿಮಾನ ಸಂಚಾರ ಸೇವೆ ಪುನರಾರಂಭಿಸುವಂತೆ ಕೋರಿ KLE  ಕಾರ್ಯಾಧ್ಯಕ್ಷರೂ ಆಗಿರುವ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ನಾಗರೀಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮನವಿ ಮಾಡಿದ್ದರು. ಈ  ಸ್ಪಂದಿಸಿದ್ದು ಸಂಬಂಧಿಸಿದ ದೇಶೀಯ ವಿಮಾನಯಾನ ಸಂಸ್ಥೆಗಳು ಬೆಳಗಾವಿ ಜನತೆಯ ಬೇಡಿಕೆಗೆ ಅನುಗುಣವಾಗಿ ಪುನರ್ ಪ್ರಾರಂಭಿಸುವಂತೆ ಸೂಚಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ಉಡಾನ್ ಯೋಜನೆ ಹಿಂಪಡೆದ ಹಿನ್ನಲೆಯಲ್ಲಿ ಹಲವು ವಿಮಾನ ಸಂಸ್ಥೆಗಳು ವಿಮಾನಗಳ ಸಂಚಾರ ರದ್ದು ಪಡಿಸಿವೆ. ಬೆಂಗಳೂರು ಹೊರತು ಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ವಿಮಾನ ಸಂಚಾರ ದಟ್ಟಣೆ ಹೊಂದಿರುವುದು ಬೆಳಗಾವಿ, ಇದರಿಂದ ದೇಶದ ವಿವಿಧ ಪ್ರದೇಶಗಳ ಸಂಪರ್ಕ ಅನುಮತಿ ನೀಡಿದ್ದರೂ ಸಂಚಾರ ದಟ್ಟಣೆ ಹೆಚ್ಚಾಗಿ ಪ್ರತಿದಿನ ೩೨ಕ್ಕೂ ಅಧಿಕ ವಿಮಾನಗಳು ಬೆಳಗಾವಿಯಿಂದ ಹಾರಾಟ ನಡೆಸುತ್ತಿದ್ದವು. 


ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ್ದ ದೆಹಲಿ, ಮುಂಬೈ ಮತ್ತು ಪುಣೆ ಮಾರ್ಗಗಳ ಸೇವೆ ಕೂಡ ಸ್ಥಗಿತಗೊಂಡಿರುವುದು ಬೆಳಗಾವಿ ಜಿಲ್ಲೆ ಬೆಳವಣಿಗೆಗೆ ಅಡ್ಡಿಯಾಗಿದೆ. ರಾಜ್ಯದ ಎರಡನೇ ರಾಜಧಾನಿ ಸ್ಥಾನಮಾ ಹೊಂದಿರುವ ಬೆಳಗಾವಿಗೆ ಈ ಮೊದಲಿನಂತೆಯೇ ವಿಮಾನ ಸೇವೆಗಳನ್ನು ಮುಂದುವರೆಸುವ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಡಾ.ಪ್ರಭಾಕರ್ ಕೋರೆ ಅವರು ಪತ್ರದ ಮೂಲಕ ಮನವಿ ಮಾಡಿದ್ದರು.

     ವಿಮಾನಯಾನವನ್ನು ಕಡಿತ ಮಾಡಿರುವುದರಿಂದ ಜಿಲ್ಲೆಯ ಆರ್ಥಿಕ ವಹಿವಾಟು ಸೇರಿದಂತೆ ಸಾರ್ವಜನಿಕ ಸೇವೆಗಳಿಗೆ ಪೆಟ್ಟು ಬೀಳುತ್ತಿದೆ. ಮೂರೂ ವಿಶ್ವವಿದ್ಯಾಲಯ, ಅತ್ಯುನ್ನತ ಅರೋಗ್ಯ ಸೇವಾ ಸಂದ್ತೆ ಜತೆಗೆ ವಿಶ್ವಮಾನ್ಯತೆಯ ಪೌಂಡಿ ಕ್ಲಸ್ಟರ್, ಹೈಡ್ರಾಲಿಕ್ಸ್ ವೈಮಾನಿಕ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬೆಳಗವಿಯ ಕೈಗಾರಿಕಾ ವಲಯ ಸೇರಿದಂತೆ ಸಾರ್ವಜನಿಕ ಸೇವಾ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದಂತಾಗಿವೆ ಎಂದು ಅವರು ಪಾತ್ರದಲ್ಲಿ ಉಲ್ಲೇಖಿಸಿದ್ದರು. ಈ ಮನವಿಗೆ ಸ್ಪಂದಿಸಿರುವ ವಿಮಾನಯಾನ ಸಚಿವರು ಡಾ.ಪ್ರಭಾಕರ ಕೊರೆಯವರೆಗೆ ಪತ್ರ  ಬರೆಯುವ ಮೂಲಕ ಬೇಡಿಕೆಗೆ ಅನುಗುಣವಾಗಿ ನಿರ್ದಿಷ್ಟ ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸುವುದು ವಿಮಾನಯಾನ ನಿರ್ವಾಹಕರಿಗೆ ಬಿಟ್ಟದ್ದು ಆದರೂ ಬೆಳಗಾವಿಗೆ ದೇಶಿಯ ವಿಮಾನಯಾನ ಸಂಸ್ಥೆಗಳು ಈ ಮೊದಲಿನಂತೆ ಸೇವೆ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.             









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು