ಜ್ಯೂಸ್ ಕುಡಿಯಿರಿ, ಯೂಟ್ಯೂಬ್ ಚಾನಲ್ ಸಬ್ ಸ್ಕ್ರೈಬರ್ ಮಾಡಿ ರಿಯಾಯಿತಿ ಪಡೆಯಿರಿ.!

ಜ್ಯೂಸ್ ಕುಡಿಯಿರಿ, ಯೂಟ್ಯೂಬ್ ಚಾನಲ್ ಸಬ್ ಸ್ಕ್ರೈಬರ್ ಮಾಡಿ ರಿಯಾಯಿತಿ ಪಡೆಯಿರಿ.!


ತನ್ನ ಚಾನಲ್ ಗೆ ಭೇಟಿ ಕೊಡಿ ಎಂದು ತನ್ನ ಬಾರ್ ಕೋಡ್ ತನ್ನ ಜ್ಯುಸ್ ಗಾಡಿಯಲ್ಲಿ ಹಾಕುವ ಮೂಲಕ ತನ್ನ ಚಾನಲ್ ಪ್ರೊಮೋಟ್ ಮಾಡುತ್ತಿರುವ ಜ್ಯುಸ್ ಗಾಡಿಯಾತ. ಇಂದು ಬೆಂಗಳೂರಿನ ಬೆಳ್ಳಂದೂರಿನಲ್ಲಿ. ಇದು ಬೆಂಗಳೂರಿನ ಮಹಿಮೆ...

ಅಂತರ್ಜಾಲ ಇಂದು ಎಲ್ಲರ ಕೈಗೂ ಎಟಕುತ್ತಿದೆ. ಜನಸಾಮಾನ್ಯರು ಇಂದು ಅಂತರ್ಜಾಲದ ಎಲ್ಲ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇಂತಹ ಕೆಲವು ವಿಚಾರಗಳು ಸಾಕ್ಷಿಯಾಗುತ್ತವೆ. ಆನ್ ಲೈನ್ ಮೂಲಕ ಹಣ ಪಾವತಿಸುವುದರಿಂದ ಹಿಡಿದು ಯೂಟ್ಯೂಬ್ ಚಾನೆಲ್ ವರೆಗೂ ಇಂದು ಜನಸಾಮಾನ್ಯರು ಅಂತರ್ಜಾಲದಲ್ಲಿ ಸಹಜವಾಗಿ ವ್ಯವಹರಿಸುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಬೆಳ್ಳಂದೂರಿನ ಜ್ಯುಸ್ ಮಾರುವ ವ್ಯಕ್ರಿಯೊಬ್ಬರು ತಮ್ಮ ಯೂಟ್ಯೂಬ್ ಚಾನಲ್ ಜಾಹಿರಾತನ್ನು ತನ್ನದೇ ಜ್ಯುಸ್ ಸ್ಟಾಲ್ ಮೇಲೆ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ.

ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ !!!

ಇತ್ತೀಚಿಗೆ ಕೇಶವ್ ಲೋಹಿಯಾ ಎಂಬುವರು ಬೆಳ್ಳಂದೂರಿನ ರಸ್ತೆ ಬದಿಯೊಂದರಲ್ಲಿ ದೊರೆಯುವ ಸಾಮಾನ್ಯ ಜ್ಯುಸ್ ಮಾರುವ ವ್ಯಕ್ತಿಯೊಬ್ಬನ ಬಳಿ ಜ್ಯುಸ್ ಕುಡಿದು ಪೇಟಿಎಂ ಮೂಲಕ ಹಣ ಪಾವತಿಸಲೆಂದು ಅಲ್ಲೇ ಕ್ಯೂ ಆರ್ ಕೋಡ್ ಬಳಿ ಮೊಬೈಲ್ ಹಿಡಿದಾಗ ಈ ಜ್ಯುಸ್ ಮಾರಾಟಗಾರ ತನ್ನ ಯೂಟ್ಯೂಬ್ ಚಾನಲ್ ಸಬ ಸ್ಕ್ರೈಬ್ ಮಾಡಿ ಎಂದು ಅದಕ್ಕೂ ಕ್ಯೂ ಆರ್ ಕೋಡ್ ಅಲ್ಲಿ ಲಗತ್ತಿಸಿ ಇಟ್ಟಿದ್ದು ಅವರ ಕಣ್ಣಿಗೆ  ಬಿದ್ದಿದೆ. ಕ್ಯೂ ಆರ್ ಕೋಡ್ ಮೂಲಕ ಆತನ ಯೂಟ್ಯೂಬ್ ಚಾನಲ್ ಗೆ ಹೋಗಿ ನೋಡಿದರೆ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಬ ಸ್ಕ್ರೈಬರ್ ಗಳನ್ನೂ ಕಂಡಿದ್ದು, ಅದರಲ್ಲಿ ತನ್ನ ಹಲವಾರು ಆಡುಗೆ, ಆಹಾರ ಸಂಬಂಧಿಸಿದ ವಿಡಿಯೋಗಳನ್ನು ಆತ ಅಪ್ಲೋಡ್ ಮಾಡಿದ್ದರು.

ತನ್ನ ಚಾನಲ್ ಗೆ ಭೇಟಿ ಕೊಡಿ ಎಂದು ತನ್ನ ಬಾರ್ಕೋಡ್ ತನ್ನ ಜ್ಯುಸ್ ಗಾಡಿಯಲ್ಲಿ ಹಾಕುವ ಮೂಲಕ ತನ್ನ ಚಾನಲ್ ಪ್ರೊಮೋಟ್ ಮಾಡುತ್ತಿರುವ ಜ್ಯುಸ್ ಗಾಡಿಯಾತ!                              

ಇದು ಬೆಂಗಳೂರಿನ ಬೆಳ್ಳಂದೂರಿನಲ್ಲಿ ಇದು ಬೆಂಗಳೂರಿನ ಮಹಿಮೆ! ಎಂದು ಆತ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ವೈರಲ್ ಆಗಿದೆ. ಒಂದು ಪುಟಾಣಿ ಜ್ಯುಸ್ ಅಂಗಡಿಯಾತನ ಮಾರ್ಕೆಟಿಂಗ್ ತಂತ್ರ ನೋಡಿ.. ಇದು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ! ಅಷ್ಟೇ ಅಲ್ಲ ಈತನ ಚಾನಲ್ ಸಬ ಸ್ಕ್ರೈಬ್ ಮಾಡಿದರೆ ಈತನ ಜ್ಯುಸ್ ಅಂಗಡಿಯಲ್ಲಿ ಶೇಕಡಾ ೧೦ ರಿಯಾಯತಿಯನ್ನು ಈತ ನೀಡುತ್ತಾನಂತೆ. ೪೦ ರೂಪಾಯಿಗಳ ಜ್ಯುಸ್ ಕುಡಿದು ಈತನ ಚಾನಲ್ ಸಬ್ ಸ್ಕ್ರೈಬ್ ಮಾಡಿ ಶೇ. ೧೦ ರಿಯಾಯತಿ ಪಡೆದು ಹೋಗಬಹುದು. ಎಂಥಾ ಐಡಿಯಾ...

Dr. Bro ಗೆ ಗೋಲ್ಡನ್ ಬಟ್ಟನ್ ! " ಚಿನ್ನನೇ ಅಲ್ಲ ಗುರು ಎಂದು ಅಸಲಿ ಸತ್ಯ ಬಿಚ್ಚಿಟ್ಟ ಗಗನ್ "

ಇದಕ್ಕೆ ಹಲವು ಮಂದಿ ವಾವ್ ಎಂದು ಕಾಮೆಂಟ್ ಮಾಡಿದ್ದೂ, ಕ್ರಿಯೇಟರ್ ಎಕಾನಮಿಗೆ ಇದು ನಿಜವಾದ ಉದಾಹರಣೆ. ಈಗ ಎಲ್ಲರೂ ಕಂಟೆಂಟ್ ಕ್ರಿಯೇಟರ್ ಗಳೇ. ಯೂಟ್ಯೂಬ್ ವಿಡಿಯೋ ಅಥವಾ ಬ್ಲಾಗ್ ಮಾಡದಿದ್ದರೆ ನೀವು ನಿಜವಾಗಿಯೂ ಮನುಷ್ಯರೇ ಅಲ್ಲವೇ ಎಂದು ಕೇಳುವಂಥ ಪರಿಸ್ಥಿತಿ ಈಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಒಳ್ಳೆಯ ಜ್ಯುಸ್ ಅಂಗಡಿ, ಚಕ್ಕವರಾದರು ಚೊಕ್ಕವಾಗಿ, ಸ್ವಚ್ಛವಾಗಿ ಇಟ್ಟುಕೊಂಡಿರುವ ಈ ಪುಟಾಣಿ ಅಂಗಡಿಯಾತನಿಗೆ ನಿಜವಾಗಿ ತನ್ನ ವಸ್ತುವನ್ನು ಜನರಿಗೆ ಹೇಗೆ ತಲುಪಿಸಬೇಕೆಂದು ಗೊತ್ತಿದೆ. ಸ್ಮಾರ್ಟ್ ನಡೆ ಎಂದು ಇನ್ನೊಬರು ಅಂಗಡಿಯಾತನ ಜಾಣತನಕ್ಕೆ ತಲೆದೂಗಿದ್ದಾರೆ.

ನನ್ನೂರಿನ ಬೀದಿಬದಿಯ ವ್ಯಾಪಾರಸ್ಥರು ಇಂದು ಮಾನ್ಯತೆ ಪಡೆಯುತ್ತಿರುವ ಬಗ್ಗೆ ಖುಷಿಯಿದೆ. ಈ ಭೂಮಿ ಮೇಲೆ ಈಗ ನಾನು ಎಲ್ಲೇ ಇರಲಿ, ನಾನು ಮಾತ್ರ ಬೆಂಗಳೂರು ಹುಡುಗಿಯೇ ಆಗಿರುವೆ ಎಂದು ತನ್ನೂರಿನ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

ಹೆಣ್ಣು ಮಗುವಿಗೆ ಇಲ್ಲಿಯವರೆಗೂ ಸರ್ಕಾರ ನೀಡುತ್ತಿದ್ದ ಭಾಗ್ಯಲಕ್ಷ್ಮಿ ಮತ್ತು ಸುಕನ್ಯಾ ಯೋಜನೆ ವಿಲೀನ


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು