ಹುಬ್ಬಳ್ಳಿಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕಮಿಷನರ್ ಹೇಳಿದ್ದೇನು ?

ಹುಬ್ಬಳ್ಳಿಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕಮಿಷನರ್ ಹೇಳಿದ್ದೇನು ?




        ಹುಬ್ಬಳ್ಳಿಯಲ್ಲಿ ಭವಾನಿ ನಗರದಲ್ಲಿನ ಉದ್ಯಮಿಯ ಮನೆಯಲ್ಲಿ ಸಿಕ್ಕ ಮೂರು ಕೋಟಿಯ ನಗದಿನ ಬಗ್ಗೆ ಪೊಲೀಸ್ ಕಮಿಷನರ್ ರಮಣ ಗುಪ್ತಾ ಅವರು ಸಂಪೂರ್ಣ ವಿವರವನ್ನು ಹೇಳಿದ್ದಾರೆ.


ರಮೇಶ್ ಬೋಣಗೇರಿ ಹಾಗೂ ಅವರ ಪುತ್ರ ಅಮೃತ ಬೋಣಗೇರಿಯವರ ಮನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ ಸಿಕ್ಕ ಬಗ್ಗೆ ಕಮಿಷನರ್ ರಮಣ ಗುಪ್ತಾ ಅವರು, ವಿವರದ ಜೊತೆಗೆ ಎಸಿಪಿ ನಾರಾಯಣ ಭರಮನಿ ಅವರ ತಂಡಕ್ಕೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದರು. ರಮೇಶ ಬೋಣಗೇರಿಯವರ ಮನೆಯಲ್ಲಿ ಇಷ್ಟೊಂದು ಹಣ ಇರುವ  ಬಗ್ಗೆ ಖಚಿತ ಮಾಹಿತಿ ಆಧರಿಸಿ ಎಸಿಪಿ ನಾರಾಯಣ ಭರಮನಿ ತಂಡ ದಾಳಿ ಮಾಡಿದ, ಸ್ವತಃ ನೋಟನ್ನ ಯಂತ್ರದ ಮೂಲಕ ಎನಿಸುವಂತಾಯಿತು. ದಕ್ಷ ಅಧಿಕಾರಿಯಿಂದ ದೊಡಮಟ್ಟದ ಹಣ ಸಿಕ್ಕಿದೆ. ಆದರೆ, ಇದರ ಅಸಲಿಯತ್ತು ಹೊರಗೆ ಬರಬೇಕಿದೆ. ಈ ರಮೇಶ ಬೋಣಗೇರಿಯ ಸಹೋದರನಾದ ಸುರೇಶ ಬೋಣಗೇರಿ ಕೆಲವು ದಿನಗಳ ಹಿಂದೆ ಇಬರು ದಂಪತಿಗಳನ್ನು ಕೂಡಿ ಹಾಕಿ, ಜೈಲು ಪಳಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು