ಜಗತ್ತನ್ನು ಒಂದುಗೂಡಿಸಬೇಕು, ಒಡೆಯಬಾರದು; ದಿ ಕೇರಳ ಸ್ಟೋರಿ' ಬಗ್ಗೆ ಸ್ಟಾರ್ ನಟನ ಅಸಮಾಧಾನ .....

ಜಗತ್ತನ್ನು ಒಂದುಗೂಡಿಸಬೇಕು, ಒಡೆಯಬಾರದು; ದಿ ಕೇರಳ ಸ್ಟೋರಿ' ಬಗ್ಗೆ ಸ್ಟಾರ್ ನಟನ ಅಸಮಾಧಾನ .....






              ನೀವು ಸಿನಿಮಾ ಒಪ್ಪಿಕೊಳ್ಳುತ್ತಿರೋ ಅಥವಾ ಇಲ್ಲವೋ ಸಿನಿಮಾ ನಿಷೇಧ ಮಾಡುವುದು ತಪ್ಪು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಬಾಲಿವುಡ್ ನಟನೆಗೆ ಪ್ರಶ್ನೆ ಮಾಡಲಾಗಿದೆ.

ದಿ ಕೇರಳ ಸ್ಟೋರಿ ಸಿನಿಮಾ 

ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ೨೦೦ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದ ನಡುವೆಯೂ ಕೆಲ ರಾಜ್ಯಗಳಲ್ಲಿ ಈ ಸಿನಿಮಾ ಮೇಲಿನ ಬ್ಯಾನ್ ಮುಂದುವರಿದಿದೆ.  ಈ ಎಲ್ಲಾ ಬೆಳವಣಿಗೆ ಬಗ್ಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಮಾತನಾಡಿದ್ದಾರೆ. ಈ ಸಿನಿಮಾ ವಿಚಾರದಲ್ಲಿ ಅವರು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ. 





ನೀವು ಸಿನಿಮಾ ನಿಷೇಧ ಒಪ್ಪಿಕೊಳ್ಳುತ್ತಿರೋ ಅಥವಾ ಇಲ್ಲವೋ ಸಿನಿಮಾ ನಿಷೇಧ ಮಾಡುವುದು ತಪ್ಪು' ಎಂಬುದು ನಿರ್ದೇಶಕ ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು.ಈ ಬಗ್ಗೆ ನವಾಜುದ್ದೀನ್ ಗೆ ಪ್ರಶ್ನೆ ಮಾಡಲಾಯಿತು. ಅನುರಾಗ್ ಕಶ್ಯಪ್ ಅವರು ಆಲೋಚನೆಯನ್ನು ಅವರು ಒಪ್ಪಿಸಿದ್ದಾರೆ. ಆದರೆ, ಸಿನಿಮಾ ಅಥವಾ ಕಾದಂಬರಿ ಯಾರನ್ನಾದರೂ ನೋಯಿಸಿದರೆ ಅದು ತಪ್ಪು ಎಂದಿದ್ದಾರೆ. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರಲು ನಾವು ಸಿನಿಮಾ ಮಾಡುವುದಿಲ್ಲ.' ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. 
ಸಿನಿಮಾ ಯಾವಾಗಲು ಜನರಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಪ್ರೀತಿಯನ್ನು ಬೆಳೆಸಬೇಕು. ಅದನ್ನು ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿ. ಒಂದು ಚಿತ್ರಕ್ಕೆ ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಶಕ್ತಿ ಇದ್ದಾರೆ ಅದು ತಪ್ಪು. ನಾವು ಜಗತ್ತನ್ನು ಒಂದುಗೂಡಿಸಬೇಕೇ ಹೊರತು  ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಈ ಮೂಲಕ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ.
          ದಿ ಕೇರಳ ಸ್ಟೋರಿ ಸಿನಿಮಾಗೆ ಸುದಿಪ್ತೋ ಸೇನ್ ನಿರ್ದೇಶನ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ೨೦೦ ಕೋಟಿ ರೂಪಾಯಿ ಮಾಡೋದು ಅನುಮಾನ ಎನ್ನಲಾಗುತ್ತಿದೆ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಪುಲ್ ಶಾ ಬಂಡವಾಳ ಹೂಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮಹಾಂತರದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು