ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ, ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ !

 

ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ, ಉಚಿತ ಬೋರ್ ವೆಲ್ ಗಾಗಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ !




   

ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ, ಈ ಯೋಜನೆಗೆ ಸರ್ಕಾರದಿಂದ 3 ರಿಂದ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.

ಈ ಯೋಜನೆಯು ಹಳ್ಳಿಗಳಲ್ಲಿ ವಾಸಿಸುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಕಷ್ಟದಲ್ಲಿರುವ ರೈತರು, ಅಲ್ಪಸಂಖ್ಯಾತ ರೈತರಿಗೆ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವುದಕ್ಕೆ, ಮೋಟರ್ ಪಂಪ್ ವಿದ್ಯುದೀಕರಣ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಸಹಾಯ ಸಿಗುತ್ತದೆ.

ರಾಜ್ಯ ಸರ್ಕಾರದಿಂದ ಶುರುವಾಗಿರುವ ಹೊಸ ಯೋಜನೆ ಹೆಸರು ಗಂಗಾ ಕಲ್ಯಾಣ ಸ್ಕೀಮ್ 2022. ನಿಮ್ಮ ನೆಲದಲ್ಲಿ ಬೋರ್ ವೆಲ್ ಕೊರಸಬೇಕು ಎಂದರೆ, ಪಂಪ್ ಮೋಟರ್ ಗಳನ್ನು ವಿದ್ಯುದೀಕರಣ ಮಾಡಲು ಸರ್ಕಾರದಿಂದ ಆರ್ಥಿಕ ಸಹಾಯ ಪಡೆಯಬೇಕು ಎಂದರೆ ರಾಜ್ಯ ಸರ್ಕಾರದ ಈ ಯೋಜನೆಗೆ ತಪ್ಪದೆ ಅರ್ಜಿ ಸಲ್ಲಿಸಿ. 

ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ. ಈ ಯೋಜನೆಗೆ ಸರ್ಕಾರದಿಂದ 3 ರಿಂದ 4 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಇನ್ನು ಅರ್ಜಿ ಸಲ್ಲಿಸುವವರ ವಯಸುವು ೧೮ ರಿಂದ ೫೫ ವರ್ಷಗಳ ಒಳಗೆ ಇರಬೇಕು. ಈ ಯೋಜನೆ ಸೌಲಭ್ಯ ಸಿಗುವುದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ. ಈ ಯೋಜನೆಯ ಮೂಲಕ ಬೆಂಗಳೂರು ಗ್ರಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಈ ಜಿಲ್ಲೆಗಳಿಗೆ ೪ ಲಕ್ಷ ರೂಪಾಯಿಯವರೆಗೂ ಸಹಾಯಧನ ನೀಡುತ್ತದೆ.

ಬೇರೆ ಜಿಲ್ಲೆಗಳಿಗೆ 3 ಲಕ್ಷ ರೂಪಾಯಿ ಸಹಾಯಧನ ಕೊಡುವುದಕ್ಕೆ ರಾಜ್ಯ ಸರ್ಕಾರದಿಂದ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಗಂಗಾ ಕಲ್ಯಾಣ ಸ್ಕೀಮ್ ಗೆ ಬೇಕಿರುವ ಅಗತ್ಯಗಳು ಹೀಗಿದೆ.


ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :

⭐ ರೈತರ ಕ್ಯಾಸ್ಟ್ ಸರ್ಟಿಫಿಕೇಟ್ ( Caste Certificate )
⭐ ಇನ್ಕಮ್ ಸರ್ಟಿಫಿಕೇಟ್ ( Income Certificate )
⭐ ಆಧಾರ್ ಕಾರ್ಡ್ ಕಾಪಿ  
⭐ RTC ಕಾಪಿ  
⭐  ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣಪತ್ರ 
⭐ ಬ್ಯಾಂಕ್ ಪಾಸ್ ಬುಕ್ ಕಾಪಿ 
⭐ ಭೂಮಿಯ ಕಂದಾಯ ಪಾವತಿ ಮಾಡಿರುವ ರಶೀದಿ 
⭐ ಸ್ವಯಂ ಘೋಷಣೆಯ ಪತ್ರ 
⭐ ಖಾತರಿ ಕೊಡುತ್ತಿರುವವರ ಸ್ವಯಂ ಘೋಷಣೆ ಪತ್ರ 


whatss



ಅಗತ್ಯವಿರುವ ಮಾಹಿತಿಗಳು ಮತ್ತು ದಾಖಲೆಗಳ ಜೊತೆಗೆ ರೈತರು 
https://kmdconline.karnataka.gov.in/Portal/login ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.

⭐ ಈ ಯೋಜನೆಗೆ ಅರ್ಜಿ ಹಾಕುವುವರು ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರೇ ಆಗಿರಬೇಕು.
ಈ ಯೋಜನೆಯ ಫಲಾನುಭವಿಗಳಿಗೆ 1 ಎಕರೆ 20 ಗುಂಟೆ ಇಂದ 5 ಎಕರೆವರೆಗೂ ಜಾಮೀನು ಇರಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಈ ಜಿಲ್ಲೆಗಳಲ್ಲಿ ಇರುವ ಜಮೀನುಗಳ ವಿಸ್ತೀರ್ಣ ಕಡಿಮೆ ಇರುವುದರಿಂದ ಈ ಜಿಲ್ಲೆಯವರು ಒಂದು ಎಕರೆ ಜಾಮೀನು ಹೊಂದಿರಬೇಕು.

⭐ ಅರ್ಜಿ ಹಾಕುವ ರೈತರು ಕಡ್ಡಾಯವಾಗಿ ಕರ್ನಾಟಕದವರೇ ಆಗಿರಬೇಕು.

⭐ ರೈತರು ಸಣ್ಣ ಅಥವಾ ಅತಿ ಸಣ್ಣ ರೈತರೇ ಆಗಿರಬೇಕು.

⭐ಹಳ್ಳಿಯಲ್ಲಿ ವಾಸ ಮಾಡುವ ಈ ರೈತನ ಕುಟುಂಬದ ವಾರ್ಷಿಕ ಆದಾಯ 96,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.

⭐ ಅರ್ಜಿ ಹಾಕುವವರ ವಯಸ್ಸು 18 ವರ್ಷದಿಂದ 55 ವರ್ಷಗಳ ಒಳಗೆ ಇರಬೇಕು.



   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು