ಉದ್ಯಮಿ ಸಹಾಯಕ್ಕಾಗಿ ನಿಂತ ಅಶ್ವಿನಿ ಪುನೀತ್ ರಾಜಕುಮಾರ್..

 ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತರಾಜಕುಮಾರ 



ಅಮೀನಘಡದ ಜನಪ್ರಿಯ ವಿಜಯ ಕರದಂಟು ಸಂಸ್ಥೆಯ ಐದನೇ ಮಳಿಗೆ ಮೊನ್ನೆ ಮಲ್ಲೇಶ್ವರದಲ್ಲಿ ಪ್ರಾರಂಭವಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಈ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಯುವ ಉದ್ಯಮಿಗಳ ಬೆನ್ನಿಗೆ ನಿಂತಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ:

1907 ರಲ್ಲಿ ಅಮೀನಘಡದಲ್ಲಿ ಪ್ರಾರಂಭವಾದ ವಿಜಯ ಕರದಂಟು ಇಂದು ರಾಜ್ಯದಂತ 18 ಶಾಖೆಗಳನ್ನು ಹೊಂದಿದೆ. ಅಮೀನಘಡದಲ್ಲಿ ಪ್ರಾರಂಭವಾದ ಮಳಿಗೆ ಇಂದು ಬಾದಾಮಿ, ಐಹೊಳೆ,  ಬಾಗಲಕೋಟೆ,ರಾಯಚೂರು, ಸಿಂಧನೂರು,  ಇಳಕಲ್ಲು,ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿವೆ. ಬೆಂಗಳೂರಿನಲ್ಲೇ ವಿಜಯನಗರ, ಮಲ್ಲೇಶ್ವರ, ಜಯನಗರ, ಡಿ.ವಿ.ಜಿ ರಸ್ತೆ  ಮತ್ತು ಮಲ್ಲೇಶ್ವರದಲ್ಲಿ ಮಳಿಗೆಗಳಿದ್ದು, ಈ ಸಂಸ್ಥೆಯನ್ನು ಕುಟುಂಬದ ನಾಲ್ಕನೇ ತಲೆಮಾರಿನವರಾದ ಸಂತೋಷ ಮತ್ತು ಸುನಿಲ್ ಮುನ್ನಡೆಸುತ್ತಿದ್ದಾರೆ. 

ಟ್ಯಾಕ್ಸಿ ಚಾಲಕರ ಉನ್ನತ ವಿದ್ಯಾಭ್ಯಾಸಕ್ಕಾಗಿ ಇರುವ ವಿದ್ಯಾರ್ಥಿವೇತನ ಇಂದೇ ಅರ್ಜಿ ಸಲ್ಲಿಸಿ:

ಪೌಷ್ಟಿಕ ಸಿಹಿತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರದಂಟಿಗೆ ಶುದ್ಧ ತುಪ್ಪ, ಸಾವಯವ ಬೆಲ್ಲ,ಗೋಡಂಬಿ, ಬಾದಾಮಿ, ಅಂಜೂರ, ಒಣಕೊಬ್ಬರಿ, ಗಸಗಸೆ, ಒಣದ್ರಾಕ್ಷಿ ಮುಂತಾದ ಪೌಷ್ಟಿಕ ಪದಾರ್ಥಗಳನ್ನು ಬೆರೆಸಿ ಮಾಡಲಾಗುತ್ತದೆ. ಹಿಂದೆ ಗರಡಿಮನೆ ಪೈಲ್ವಾನರ ಶಕ್ತಿ- ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟು ಕೊಡಲಾಗುತ್ತಿತ್ತು. ಅಷ್ಟೇ ಅಲ್ಲ ಗರ್ಭಿಣಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ಕೊಡಲಾಗಿತ್ತು. ಈಗ ಕರದಂಟು ಆರೋಗ್ಯಕರ ಸಿಹಿತಿನಿಸಾಗಿದ್ದು ಎಲ್ಲ ವಯಸ್ಸಿನವರೂ ಸವಿಯಬಹುದಾಗಿದೆ. ಎನ್ನುತ್ತಾರೆ ಸುನಿಲ್ ಮತ್ತು ಸಂತೋಷ್.

ಇದರಲ್ಲಿ ಸಕ್ಕರೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಧುಮೇಹ ಇರುವವರು ಸಹ ಯಾವುದೇ ಭಯವಿಲ್ಲದೆ ಈ ಸಿಹಿತಿನಿಸನ್ನು ತಿನ್ನಬಹುದಾಗಿದೆಯಂತೆ. ವಿಜಯ ಕರದಂಟು ಮಳಿಗೆಗಳಲ್ಲಿ ಕರದಂಟು ಅಲ್ಲದೆ ಕಾಜು, ಪೇಡ, ಬಂಗಾಲಿ ಸೇರಿದಂತೆ ಬೇರೆ ಸಿಹಿತಿಂಡಿಗಳು ಸಹ ಲಭ್ಯವಿದೆ ಎನ್ನುವುದು ಸುನಿಲ್ ಮಾತು.


 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು