ವಾರಭವಿಷ್ಯ : 14-05-2023 ರಿಂದ 20-05-2023 ರವರೆಗೆ :

 ವಾರಭವಿಷ್ಯ : 14-05-2023 ರಿಂದ 20-05-2023 ರವರೆಗೆ :




 ಮೇಷ : 

ಮೇಷ: (ಅಶ್ವಿನಿ ಭರಣಿ ಕೃತಿಕ 1) ಅತಿಯಾದ ಆತ್ಮಗೌರವ ಇರುತ್ತದೆ, ಇದು ನಿಮಗೆ ತೊಂದರೆಯನ್ನು ತರುವ ಸಾಧ್ಯತೆ ಸಹ ಇದೆ. ಇಲ್ಲಸಲ್ಲದ ಚಿಂತೆಗಳು ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿರುತ್ತದೆ. ಪಾಕ ಪ್ರವೀಣರಿಗೆ ಹೆಚ್ಚಿನ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಆಹಾರ ದೋಷದಿಂದ ಅನಾರೋಗ್ಯ ಉಂಟಾಗಬಹುದು. ಅಸ್ತಿಕೊಳ್ಳುವ ವಿಚಾರದಲ್ಲಿ ಅಸ್ತಿ ದಾಖಲೆ ಪರಿಶೀಲನೆ ಬಹಳ ಮುಖ್ಯ. ಖರ್ಚಿನ ಬಗ್ಗೆ ಕಡಿವಾಣವಿರಲಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಖರ್ಚು ಹೆಚ್ಚಾಗಬಹುದು. ನಾರಾ ದೌರ್ಬಲ್ಯ ಇರುವವರು ಚಿಕಿತ್ಸೆ ಪಡೆಯಬೇಕಾದೀತು. ವೈದ್ಯರಿಗೆ ಹೆಚ್ಚಿನ ಬೇಡಿಕೆ ಬಂದು ಆದಾಯ ಬರುವ ಸಾಧ್ಯತೆ ಇದೆ. ಯಾವುದೊ ಒಂದು ಪಾಪಪ್ರಜ್ಞೆ ನಿಮ್ಮನ್ನು ಸದಾಕಾಲ ಕಾಡುತ್ತದೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. 
 





ವೃಷಭ :

ವೃಷಭ: (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2) ಆತ್ಮವಿಶ್ವಾಸ ವೃದ್ಧಿಸಿಕೊಂಡು ಕೆಲಸ ಕಾರ್ಯಗಳಲ್ಲಿ ಮಗ್ನರಾಗುವಿರಿ. ವಿವಾಹದ ಬಗ್ಗೆ ಈಗ ಕಾರ್ಯಪ್ರವೃತ್ತರಾಗಬಹುದು. ಹಲವು ದಿನಗಳಿಂದ ಕುಟುಂಬದವರೊಡನೆ ಇದ್ದ ಮನಸ್ತಾಪಗಳು ದೂರವಾಗುತ್ತವೆ. ಗಿಡಮೂಲಿಕೆ ಔಷಧಿಯನ್ನು ನೀಡುವವರಿಗೆ ಬೇಡಿಕೆ ಹೆಚ್ಚಾಗುತ್ತವೆ. ವೃತ್ತಿಯಲ್ಲಿದ್ದ ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತವೆ. ಬಟ್ಟೆ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಲಾಭ ಬರುತ್ತದೆ. ಕೆಲವು ಉದ್ದಿಮೆದಾರರಿಗೆ ಲಾಭ ಕಡಿಮೆಯಾದರೂ ನಷ್ಟ ಇರುವುದಿಲ್ಲ. ಗುತ್ತಿಗೆದಾರರಿಗೆ ಬಾಕಿ ಇದ್ದ ಹಣಗಳು ಈಗ ಬರಬಹುದು. ಧನಧಾಯವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಬಹುದು. ನಿಮ್ಮ ಚಟುವಟಿಕೆಗಳಲ್ಲಿ ಮಂದಗಾತಿಯನ್ನು ಕಾಣಬಹುದು ಅಸ್ತಿ ವಿಚಾರದಲ್ಲಿ ಹೆಚ್ಚು ಹಣ ಪೋಲಾಗುವ ಸಾಧ್ಯತೆ ಇದೆ,  ಎಚ್ಚರ ವಹಿಸಿರಿ.




ಮಿಥುನ :

ಮಿಥುನ: (ಮೃಗಶಿರಾ 3 4 ಆರಿದ್ರಾ ಪುನರ್ವಸು 1 2 3) ಸಂಗಾತಿಯ ಅಭಿಪ್ರಾಯಗಳು ನಿಮಗೆ ಸರಿ ಕಾಣದಿರಬಹುದು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ನಿರಾಳ ಕಾಣುತ್ತದೆ. ವೈಯಕ್ತಿಕ ವಿಚಾರಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬೇಡಿರಿ ಸಾಂಬಾರ ಪದರ್ತಿಗಳನ್ನು ರಫ್ತು ಮಾಡುವವರಿಗೆ ಉತ್ತಮ ಬೇಡಿಕೆ ದೊರೆತು ಹೆಚ್ಚಿನ ಆದೇಶಗಳು ದೊರೆಯುತ್ತವೆ. ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಅದಿರು ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ. ಸಂತಾನ ಅಪೇಕ್ಷಿತರು ದೈವದ ಮೊರೆಹೋಗುವುದು ಅನಿವಾರ್ಯವಾಗಲಿದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. 




ಕಟಕ :

ಕಟಕ: (ಪುನರ್ವಸು 4 ಪುಷ್ಯ ಆಶ್ಲೇಷ) ವ್ಯಾವಹಾರಿಕವಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗ ಕಾಲ ಸೂಕ್ತವಾಗಿದೆ. ಗುತ್ತಿಗೆದಾರರಿಗೆ ಅವರ ಯೋಜನೆಗಳನ್ನು ಇತರರು ಅಪೇಕ್ಷಿಸುವಂತೆ ಮಾಡುವ ಸಾಮರ್ಥ್ಯ ಒದಗಿಬರುತ್ತದೆ. ಹವ್ಯಾಸಿ ಬರಹಗಾರರಿಗೆ ಹೇರಳವಾದ ಅವಕಾಶಗಳು ದೊರೆಯುತ್ತವೆ. ಉದ್ಯೋಗ ನಿಮಿತ್ತ ದೂರದ ಪ್ರಯಾಣವನ್ನು ಮಾಡಲೇಬೇಕಾದ ಅನಿವಾರ್ಯತೆ ಒದಗಲಿದೆ. ಕ್ಷೀರ ಉತ್ಪನ್ನಗಳನ್ನು ಮಾರಾಟಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ವೃತ್ತಿಯಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಜೀವನದಲ್ಲಿ ಬಯಸಿದ ನೆಲೆಯನ್ನು ಗಟ್ಟಿಗೊಳಿಸಿಕೊಂಡ ತೃಪ್ತಿ ನಿಮಗಿರುತ್ತದೆ. ಧನ ಆದಾಯವು ಮಾಧ್ಯಮ ಗತಿಯಲ್ಲಿರುತ್ತದೆ. ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ನಿಮ್ಮ ಕೆಲವು ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ.




ಸಿಂಹ :

ಸಿಂಹ: (ಮಖ ಪೂರ್ವಫಾಲ್ಗುಣಿ ಉತ್ತರ ಫಲ್ಗುಣಿ 1) ವಿದೇಶದಲ್ಲಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಮಾತಿನಿಂದ ಕಾರ್ಯ ಸಾಧನೆ ಮಾಡುವ ಗುಣದಿಂದ ನಿಮಗೆ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳ ಮನಸ್ಥಿತಿಯನ್ನು ಅರಿತು ನಿಮ್ಮ ಬೇಡಿಕೆಗಳನ್ನು ಮಂಡಿಸಿರಿ, ಸಿನಿಮಾ ಕಲಾವಿದರುಗಳಿಗೆ ಹೆಚ್ಚು ಅವಕಾಶಗಳು ದೊರೆತು ಸಂಪಾದನೆ ಸಹ ಹೆಚ್ಚುತ್ತದೆ. ಸರಕು ಸಾಗಾಣಿಕೆಯನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಮಕ್ಕಳಿಗೆ ನೋವಾಗದಂತೆ ಮಾತನಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಂಸಾರದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಅತಿ ಮುಖ್ಯ. ಆದಾಯವು ಮಾಧ್ಯಮ ಗತಿಯಲ್ಲಿರುತ್ತದೆ. ಅತಿಯಾದ ಖರ್ಚುಗಳನ್ನು ಮಾಡದಿರುವುದು ಉತ್ತಮ. ಸ್ವಯಂಕೃತ ಅಪರಾಧಗಳಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.







ಕನ್ಯಾ :

ಕನ್ಯಾ: (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1 2) ಗೃಹೋಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ವ್ಯಾಪಾರವಾಗುತ್ತದೆ. ಇನ್ನೊಬ್ಬರಿಗೆ ಹಣ ಕೊಡುವಾಗ  ಅಥವಾ ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರ ವಹಿಸಿರಿ. ಉದ್ದಿಮೆದಾರರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚು ಉತ್ಪಾದನೆಯನ್ನು ಮಾಡಬಹುದು. ಮಿತ್ರರಿಂದ ಸಹಾಯ ದೊರೆಯುವ ಸೂಚನೆಗಳಿವೆ. ಬಟ್ಟೆ ತಯಾರಕರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸ್ವಂತ ಉದ್ದಿಮೆ ನಡೆಸುತ್ತಿರುವವರಿಗೆ ಅವರ ಕಾರ್ಯ ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳುವ ಅವಕಾಶ ಇರುತ್ತದೆ. ಅತಿಯಾದ ಅಸೆ ಆಕಾಂಕ್ಷೆಗಳು ಖಂಡಿತ ಬೇಡ, ಹಣದ ಒಳಹರಿವು ಕಡಿಮೆ ಇರುವುದರಿಂದ ಖರ್ಚಿಗೆ ಕಡಿವಾಣವನ್ನು ಹಾಕಿರಿ. ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿಯನ್ನು ನಿರೀಕ್ಷೆ ಮಾಡಬಹುದು. ಬೆನ್ನು ನೋವು ಸ್ವಲ್ಪ ಕಾಣಿಸಬಹುದು.




ತುಲಾ :

ತುಲಾ: ತುಲಾ ರಾಶಿ (ಚಿತ್ತಾ 3 4  ಸ್ವಾತಿ ವಿಶಾಖ 1 2 3 ) ಹಣ ಹೂಡಿಕೆ ವಿಚಾರದಲ್ಲಿ ಹೆಚ್ಚು ಎಚ್ಚರ ವಹಿಸಿರಿ, ಹಣ ಮುಳುಗುವ ಸಾಧ್ಯತೆಗಳಿವೆ. ಅನಿರೀಕ್ಷಿತ ಕೌಟುಂಬಿಕ ಸವಾಲುಗಳು ಬರಬಹುದು. ಉಡುಪನ್ನು ವಿನ್ಯಾಸ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ರಾಜಕೀಯ ಪ್ರಚಾರಕರಿಗೆ ಪ್ರಚಾರ ಮಾಡಲು ಸೂಕ್ತ ಹಣದ ವ್ಯವಸ್ಥೆ ಆಗುತ್ತದೆ. ವಿದೇಶದಲ್ಲಿರುವ ತಮ್ಮ ಸಂಗತಿಗಳನ್ನು ಈಗ ಹೋಗಿ ಸೇರಿಕೊಳ್ಳುವ ಅವಕಾಶ ದೊರೆಯುತ್ತದೆ. ಯೋಜನೆಯ ಹಾಗೂ ಅವುಗಳನ್ನು ಬೆಳೆಸುವ ಬಗ್ಗೆ ತಜ್ಞರ ಜೊತೆ ಸಲಹೆಯನ್ನು ಪಡೆಯಿರಿ, ಹಣದ ಒಳಹರಿವು ಮಾಧ್ಯಮ ಗತಿಯಲ್ಲಿ ಇರುತ್ತದೆ. ಬಂಧುಗಳ ಜೊತೆ ವಿಶ್ವಾಸ ವೃದ್ಧಿಯನ್ನು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸುವುದು ಒಳ್ಳೆಯದು.





ವೃಶ್ಚಿಕ :

ವೃಶ್ಚಿಕ: (ವಿಶಾಖ 4 ಅನುರಾಧ ಜೇಷ್ಠ) ಬಂಧುಗಳ ಸಂತೋಷ ಸಮಾರಂಭಕ್ಕೆ ಹೋಗಿ  ಬರುವಿರಿ.ಸೃಜನಶೀಲ ಯೋಜನೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳ ಒಡನಾಟ ಅನಾಯಾಸವಾಗಿ ದೊರೆಯುತ್ತದೆ, ಹಿರಿಯ ಅಧಿಕಇರ್ಗಳಿಗೆ ಸಹದ್ಯೋಗಿಗಳ ಅಸಹಕಾರ ಆಗಬಹುದು. ಮಕ್ಕಳ ಜೊತೆಯಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶವಿದೆ. ಆಮದು ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಪರಮಾಪ್ತರ ಭೇಟಿ ಆಗುವ ಲಕ್ಷಣಗಳಿವೆ. ವಿದ್ಯಾರ್ಥಿಗಳಿಗೆ ಕೆಲವೊಂದು ಸೌಲಭ್ಯಗಳು ಸಧ್ಯಕ್ಕೆ ಸಿಗದಿರಬಹುದು. ಧನಾದಾಯವು ತೃಪ್ತಿಕರವಾಗಿರುತ್ತದೆ. ಹಳೆಯ ಬಾಕಿಸಲಾಗಳನ್ನು ತೀರಿಸಿಕೊಳ್ಳಬಹುದು. ಕೃಷಿಕರಿಗೆ ಉತ್ತಮ ಬೆಲೆ ಸಿಗುವ ಸಂದರ್ಭವಿದೆ. ಸರ್ಕಾರೀ ಕಚೇರಿಯ ಕೆಲಸಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.




ಧನಸ್ಸು :

ಧನುಸ್ಸು: (ಮೂಲ ಪೂರ್ವಾಷಾಢ ಉತ್ತರಾಷಾಢ 1) ಶಿಲ್ಪಿಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತದೆ, ಅದರಲ್ಲೂ ಮರದ ಮೂರ್ತಿಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ರಫ್ತು ವ್ಯಾಪಾರದಲ್ಲಿ ಹಿನ್ನಡೆ ಅನಿಸಿದರೂ ವ್ಯಾಪ್ಯಾರಕ್ಕೆ ಧಕ್ಕೆ ಇರುವುದಿಲ್ಲ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಕೆಲಸಕಾರ್ಯಗಳಿಗೆ  ಅಡ್ಡಿಯಾದರು ಅಂತಿಮ ಜಯ ನಿಮ್ಮದೇ ಆಗಿರುತ್ತದೆ. ಯಾವುದೇ ವ್ಯಕ್ತಿಯ ಹೊಗಳಿಕೆಯ ಮಾತಿಗೆ ಮರುಳಾಗಿ ಹಣ ಹೂಡಿಕೆ ಮಾಡಬೇಡಿರಿ. ನಿಮ್ಮ ಮನಸ್ಥಿತಿಗೆ ಹೊಂದುವ ಉದ್ಯೋಗ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಬಂಧುಗಳ ಸಮಸ್ಯೆಗಳನ್ನು ಎಲ್ಲರೂ ಮೆಚ್ಚುವಂತೆ ಬಗೆಹರಿಸುವಿರಿ. ಸಾಂಸ್ಕೃತಿಕ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಕಾರ್ಯ ಒತ್ತಡ ಹೆಚ್ಚಾಗುತ್ತದೆ. ದಿನಸಿ ಸಗಟು ವ್ಯಾಪಾರಿಗಳಿಗೆ ಹೆಚ್ಚು ದಿನಸಿ ಸಂಗ್ರಹ ಮಾಡುವ ಅವಕಾಶ ದೊರೆಯುತ್ತದೆ.



ಮಕರ :

ಮಕರ: (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1,2) ಅನ್ವೇಷಣೆಯ ಸ್ವಭಾವವು ನಿಮ್ಮ ವ್ಯಕ್ತಿತ್ವಕ್ಕೆ ಹೊಸತಿರುವನ್ನು  ಕೊಡುತ್ತದೆ.ಔದ್ಯೋಗಿಕ ವ್ಯವಹಾರವನ್ನು ಮಾಡುವವರಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತದೆ. ಕೃಷಿ ಕಾರ್ಯಗಳು ಭರದಿಂದ ಸಾಗುತ್ತವೆ. ಹಿರಿಯ ಇಂಜಿನಿಯರಿಂಗ್ ಗಳ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಎಣ್ಣೆ ಕಾಳುಗಳನ್ನು ವ್ಯಾಪಾರ ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಕಠಿಣ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಹೆಸರನ್ನು ಗಳಿಸಿಕೊಳ್ಳುವಿರಿ. ಉದ್ದಿಮೆದಾರರು ಕಾರ್ಮಿಕರಿಗೆ ನೋವಾಗುವಂತೆ ಮಾತನಾಡದಿರುವುದು ಒಳ್ಳೆಯದು. ನಿಮ್ಮ ಸಹವರ್ತಿಗಳೊಡನೆ ರಾಜಿಯಾದರೂ ಸಹ ಏನು ತೊಂದರೆ ಇಲ್ಲ. ಹಣದ  ಒಳಹರಿವು ಸಾಮಾನ್ಯ  ಮಟ್ಟದಲ್ಲಿರುತ್ತದೆ.ಉನ್ನತ  ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಬೇಕಾದ ಅನುಕೂಲಗಳು ದೊರೆಯುತ್ತವೆ.



ಕುಂಭ :

ಕುಂಭ: (ಧನಿಷ್ಠ 3 4 ಶತಭಿಷಾ ಪೂರ್ವಭಾದ್ರ 1 2 3) ಬರುವ ಅವಕಾಶಗಳನ್ನು ಬಳಸಿಕೊಂಡಲ್ಲಿ ಇನ್ನು ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಸುಗಂಧ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರ ನಡೆದು ಲಾಭ  ಬರುತ್ತದೆ.ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಹೆಚ್ಚು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತವೆ. ಸ್ನೇಹಿತರೊಡನೆ ಕೂಡಿ ಮಾಡುವ ವ್ಯವಹಾರಗಳು ಗಟ್ಟಿಯಾಗಿ ಮುಂದುವರೆಯುತ್ತವೆ. ಉದ್ದಿಮೆದಾರರು ಉದ್ದೆಮೆಯ ನವೀಕರಣಕ್ಕಾಗಿ ಬಂಡವಾಳ ಹೂಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮಕಾಲ, ಸ್ಥಿರಾಸ್ತಿಯ ಮಾರಾಟ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಸಂಗತಿಯು ನಿಮ್ಮೆಲ್ಲ ಕೆಲಸ ಕಾರ್ಯಗಳಿಗೆ ಒತ್ತಾಸೆಯಿಂದ ನಿಲ್ಲುವರು. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ.




ಮೀನ:

ಮೀನ: (ಪೂರ್ವಭಾದ್ರ ೪ ಉತ್ತರಾಭಾದ್ರ ರೇವತಿ) ಈ ಹಿಂದೆ ನಿಮ್ಮ  ಈಗ ನಿಧಾನವಾಗಿ ಕರಗ ತೊಡಗುತ್ತದೆ. ಎಲ್ಲರನ್ನು ಗೌರಾವಾಹಿತವಾಗಿ ನಡೆಸಿಕೊಳ್ಳುವುದು ಬಹಳ ಮುಖ್ಯ. ವೃತ್ತಿಪರವಾಗಿ ಸ್ಥಳ ಬದಲಾವಣೆಯಿಂದ  ಕಷ್ಟವಾಗಬಹುದೆಂಬ ಶಂಕೆ ಬೇಡ, ಅಲ್ಲಿಯೂ ಸೂಕ್ತ ಸಹಾಯ ದೊರೆಯುತ್ತದೆ. ಮನೆಯವರ ಸಹಾಯದಿಂದ ನಿಮ್ಮ ಹಣಕಾಸಿನ ತೊಂದರೆಗಳು ದೂರಾಗುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ಸಿಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಹಿತ ಶತ್ರುಗಳ ಬಗ್ಗೆ ಎಚ್ಚರವಹಿಸಿರಿ. ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗುತ್ತಎ. ಕೃಷಿಕರಿಗೆ ಹೆಚ್ಚಿನ ಸಹಾಯಧನಗಳು ಒದಗಿಬರುತ್ತವೆ. ಕಣ್ಣಿನ ತೊಂದರೆ ಅಥವಾ ಉಸಿರಾಟದ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಉದ್ದಿಮೆದಾರರಿಗೆ ಕಾರ್ಮಿಕರಿಂದ ಸಂಕಷ್ಟಗಳು ಎದುರಾಗಬಹುದು. 


 








ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು