ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯರಿಗೆ ಪ್ರತಿ ತಿಂಗಳಿಗೆ 1,200 ರೂಪಾಯಿ ಮಾಸಾಶನ ಅರ್ಜಿ ಸಲ್ಲಿಕೆ ಹೇಗೆ?? ಅಗತ್ಯ ದಾಖಲೆಗಳು ಯಾವುವು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….

ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯರಿಗೆ ಪ್ರತಿ ತಿಂಗಳಿಗೆ 1,200 ರೂಪಾಯಿ ಮಾಸಾಶನ ಅರ್ಜಿ ಸಲ್ಲಿಕೆ ಹೇಗೆ?? ಅಗತ್ಯ ದಾಖಲೆಗಳು ಯಾವುವು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….





      ಸಂಧ್ಯಾ ಸುರಕ್ಷಾ ಯೋಜನೆಯ ಮಾಸಾಶನ ಪಡೆಯಲು ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು ನೇಕಾರರು, ಮೀನುಗಾರರು, ಅಸಂಘಟಿತ ವಲಯದ ಕಾರ್ಮಿಕರು ಅರ್ಹರಾಗಿದ್ದಾರೆ.


ಸಂಧಾಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತಾ ಮಾನದಂಡಗಳನ್ನು ಈ ಕೆಳಗಿನಂತಿವೆ ;

💥ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು 65 ವರ್ಷ ಮತ್ತು ಮೇಲ್ಪಟ್ಟವರಾಗಿಯಬೇಕು. 

💥ಸ್ಥಳೀಯ ಕಂದಾಯ ಪ್ರಾಧಿಕಾರವು ಪ್ರಮಾಣೀಕರಿಸಿದಂತೆ ಪ್ರಸ್ತಾಪಿತ ಪಿಂಚಣಿದಾರ ಮತ್ತು ಅವನ ಅಥವಾ ಅವಳ ಸಂಗಾತಿಯ ಒಟ್ಟು ವಾರ್ಷಿಕ ಆದಾಯವು ೨೦,೦೦೦ ರೂಪಾಯಿ ಮೀರಬಾರದು.

💥ಸಾರ್ವಜನಿಕ ಅಥವಾ ಖಾಸಗಿ ಮೂಲದಿಂದ ಯಾವುದೇ ರೀತಿಯ ಪಿಂಚಣಿ ಪಡೆಯುತ್ತಿರಬಾರದು.

💥ಫಲಾನುಭವಿಗೆ ಗಂಡು ಮಕ್ಕಳು ಇದ್ದರು ಕೂಡ ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ. 

💥ಜನನ ಪ್ರಮಾಣ ಪತ್ರ, ವೈದ್ಯಕೀಯ ಧೃಡೀಕರಣ ಪಾತ್ರ ಅಥವಾ ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿನ ಜನ್ಮದಿನಾಂಕ ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.


💥ಫಲಾನುಭವಿಯು ತನ್ನ ಆದಾಯವನ್ನು ಸ್ವಯಂ ಘೋಷಿಸಿದರೆ, ವಯಸ್ಕ ಮಕ್ಕಳ ಆದಾಯವನ್ನು ಉದ್ದೇಶಿತ ಸಾಮಾಜಿಕ ಭದ್ರತಾ ಪಿಂಚಣಿದಾರರ ಆದಾಯದ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ.

💥ಪಿಂಚಣಿದಾರ ಮತ್ತು ಅವನ ಸಂಗಾತಿಯು ಹೊಂದಿರುವ ಠೇವಣಿಗಳ ಒಟ್ಟು ಮೌಲ್ಯ 10,000 ರೂ ಮೀರಬಾರದು.

💥ವೃದ್ಧಾಪ್ಯ ಪಿಂಚಣಿ, ನಿರ್ಗತಿಕ ವಿಧವೆ ಪಿಂಚಣಿ ಅಥವಾ ದೈಹಿಕವಾಗಿ ಅಂಗವಿಕಲ ಪಿಂಚಣಿ ಪಡೆಯುವ ವ್ಯಕ್ತಿಗಳು ಈ ಯೋಜನೆಗೆ ಅರ್ಹರಲ್ಲ.





                       ಕರ್ನಾಟಕದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ಪ್ರಾರಂಭಿಸಿದೆ. ಅಂದರೆ, ಇಳಿವಯಸ್ಸಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಜೀವಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ 2007-08 ರಿಂದ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಾರಾಲಗಿದೆ. ಈ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಅರ್ಹ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 1,200 ರೂಪಾಯಿ ಮಾಸಾಶನ ಪಡೆಯಬಹುದು.


ಸಂಧ್ಯಾಸುರಕ್ಷಾ ಯೋಜನೆಯ ಮಾಸಾಶನ ಪಡೆಯಲು ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು ಮೀನುಗಾರರು, ಅಸಂಘಟಿತ ವಲಯದ ಕಾರ್ಮಿಕರು ಅರ್ಹರಾಗಿದ್ದಾರೆ.


ಯೋಜನೆಯ ಪ್ರಯೋಜನಗಳು ಹೀಗಿವೆ ;

✔ ಈ ಯೋಜನೆಯಡಿ ಫಲಾನುಭವಿಗಳಿಗೆ ನಿಗದಿತ ಮಾಸಿಕ ಪಿಂಚಣಿ ರೂ 1,200 ರೂ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸಿಗುತ್ತದೆ. 

✔ ನಿಯಮಿತ ಪಿಂಚಣಿಯ ಹೊರತಾಗಿ, ಎನ್ ಜಿ ಒ ಗಳ ಮೂಲಕ ಫಲಾನುಭವಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಸಹಕರಿಸುತ್ತದೆ.

✔ ಸಂಧ್ಯಾ ಸುರಕ್ಷಾ ಯೋಜನೆಯ ಅರ್ಹ ಫಲಾನುಭವಿಗಳಿಗೆ ಹಣಕಾಸಿನ ನೆರವು ನೀಡುವುದಲ್ಲದೆ, ಹಿರಿಯ ನಾಗರಿಕರಿಗೆ ಸಹಾಯ ಮಾಡಲು ವೃದ್ಧಾಪ್ಯದ ಮನೆಗಳನ್ನು ಸ್ಥಾಪಿಸಲು ಎನ್ ಜಿ ಒ ಗಳಿಗೆ ಅಗತ್ಯ ನೆರವು ನೀಡುತ್ತದೆ.


✔ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಹಾಯ ಮಾಡುವ ಎಂ ಜಿ ಒ ಗಳು ಯೋಜನೆಯ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಹ ನೀಡುತ್ತವೆ. ಹಿರಿಯ ನಾಗರಿಕನನ್ನು ನೋಡಿಕೊಳ್ಳಲು ಮತ್ತು ಅವರಿಗೆ ಬೆಂಬಲ ನೀಡಲು ಸರ್ಕಾರ ಡೇ ಕೇರ್ ಕೇಂದ್ರಗಳನ್ನು ಸ್ಥಾಪಿಸಿದೆ.

✔ ವಿವಿಧ ಸ್ಥಳಗಳಲ್ಲಿ ಸಹಾಯವಾಣಿಗಳನ್ನು ಸಹ ಸ್ಥಾಪಿಸಲಾಗಿದೆ. ಇದು ಪೊಲೀಸ್ ಇಲಾಖೆ ಮತ್ತು ಎಂ ಜಿ ಒ ಗಳ ನೆರವಿನಿಂದ ಕೂಡಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಮಾಡುವ ಪ್ರತಿಯೊಂದು ಒತ್ತಡ ಕರೆಗೂ ಪೊಲೀಸರು ಸ್ಪಂದಿಸುತ್ತಾರೆ.





ಅರ್ಜಿ ಸಲ್ಲಿಕೆ ವಿಧಾನ :

ಅರ್ಜಿದಾರರು ಆಫ್ ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದ್ದು, ಸಂಧ್ಯಾ ಸುರಕ್ಷಾ ಯೋಜನೆ ಅರ್ಜಿ ನಮುನೆಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಲಗತ್ತಿಸಿ. ಅರ್ಜಿ ನಮೂನೆಯನ್ನು ನಿಮ್ಮ ಪ್ರದೇಶದ ಗ್ರಾಮ ಪಂಚಾಯತಿ ಕಚೇರಿ ಅಥವಾ ಬ್ಲಾಕ್, ಪುರಸಭೆ ಕಚೇರಿಯಲ್ಲಿ ಸಲ್ಲಿಸಿ.


ಫಲಾನುಭವಿಗಳ ಆಯ್ಕೆ ಹೇಗೆ ?

ಈ ಯೋಜನೆಯಡಿ  ಫಲಾನುಭವಿಗಳನ್ನು ಈ ಕೆಳಗಿನ ವರ್ಗಗಳಿಂದ ಆಯ್ಕೆ ಮಾಡಲಾಗುತ್ತದೆ.

☆ ಸಣ್ಣ ರೈತರು 

☆ ಅತಿ ಸಣ್ಣ ರೈತರು 

☆ ಕೃಷಿ ಕಾರ್ಮಿಕರು 

☆ ನೇಕಾರರು 

☆ ಮೀನುಗಾರರು 

☆ ಅಸಂಘಟಿತ ವಲಯದ ಕಾರ್ಮಿಕರು 

 ಆದರೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ವ್ಯಾಪ್ತಿಗೆ ಬರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ.



ಅಗತ್ಯ ದಾಖಲೆಗಳು ಏನು ?

1  ವಾಸಸ್ಥಳ ದೃಷಿಕರಣ ಪತ್ರ 

2  ಆದಾಯ ಪ್ರಮಾಣ ಪತ್ರ 

3  ವಯಸ್ಸಿನ ಪುರಾವೆ: ಸರಿಯಾದ ಪುರಾವೆಗಳೊಂದಿಗೆ ಹುಟ್ಟಿದ ದಿನಾಂಕ (SSLC ಮಾರ್ಕ್ಸ್ ಕಾರ್ಡ್, ಪಾಸ್ಪೋರ್ಟ್, ಚಲನ ಪರವಾನಗಿ, ರೇಷನ್ ಕಾರ್ಡ್, ಟಿ.ಸಿ ಅಥವಾ ಚುನಾವಣಾ ಗೃತಿನ ಚೀಟಿ )

4  ಬ್ಯಾಂಕ್ ಪಾಸ್ಬುಕ್ 

5  ಉದ್ಯೋಗ ಪ್ರಮಾಣ ಪತ್ರಕ್ಕೆ ಆಯಾ ತಾಲೂಕಿನ ತಹಶೀಲ್ದಾರ್ ಸಹಿ ಮಾಡಲಿದ್ದಾರೆ.









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು