MB Patil 26 ನೇ ವಯಸ್ಸಿಗೆ ವಿಧಾನಸಭೆ ಮೆಟ್ಟಿಲು ಏರಿದ್ದ ಎಂ ಬಿ ಪಾಟೀಲ್ ಗೆ ಸಚಿವ ಸ್ಥಾನ ::

MB Patil 26 ನೇ ವಯಸ್ಸಿಗೆ ವಿಧಾನಸಭೆ ಮೆಟ್ಟಿಲು ಏರಿದ್ದ ಎಂ ಬಿ ಪಾಟೀಲ್ ಗೆ ಸಚಿವ ಸ್ಥಾನ ::





ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಸ್ಥಗಿತ ಹೆಸ್ಕಾಂ - ಬ್ಯಾಂಕ್ ಜೊತೆಗಿನ ಒಪ್ಪಂದ ಅಂತ್ಯ : ಗ್ರಾಹಕರ ಪರದಾಟ .........



   ರಾಜಕೀಯ ಹಿನ್ನಲೆ ಹೊಂದಿದ್ದ ಎಂ ಬಿ ಪಾಟೀಲರು ರಾಜಕೀಯ ಜೀವನಕ್ಕೆ ಬಂದಿದ್ದೆ ಅಚಾನಕವಾಗಿ!! ಹೌದು ಅವರ ರಾಜಕೀಯ ಜೀವನ, ಶಿಕ್ಷಣ, ಸಚಿವರಾಗಿದ್ದ ಮಾಡಿದ ಕಾರ್ಯದ ಕುರಿತು ಇಲ್ಲಿದೆ ಮಾಹಿತಿ ..

ಅಚಾನಕ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಎಂ ಬಿ ಪಾಟೀಲ್ !

ಎಂ ಬಿ ಪಾಟೀಲ್ ಅವರ ತಂದೆ ಬಿ ಎಂ ಪಾಟೀಲ್ ಅವರು 1991 ರಲ್ಲಿ ಅಚಾನಕ ನಿಧನರಾದರು. ಈ ಕಾರಣದಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಎಂ ಬಿ ಪಾಟೀಲ್ ಅವರು 1992ರಲ್ಲಿ ತ್ರಿಕೋಟಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲುವ ಮುಖಾಂತರ 26ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ಹತ್ತಿದರು. 1998ರಲ್ಲಿ ವಿಜಯಪುರ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 2004ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. 2008 , 2012 , 2018 , 2023ರಲ್ಲಿ ಸತತ ನಾಲ್ಕು ಬಾರಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

                 ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರಾಗಿದ್ದಾರೆ. ಬಲೇಶ್ವರ ಕ್ಷೇತ್ರದಿಂದ ಸ್ಪಧಿಸಿ ಶಾಸಕ, ಜಲಸಂಪನ್ಮೂಲ ಸಚಿವರಾಗಿ ಹೆಸರು ಗಳಿಸಿದವರು. ಈಗ ಕರ್ನಾಟಕ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸಿದರು. ಮಲ್ಲನಗೌಡ ಬಸನಗೌಡ ಪಾಟೀಲ್ ಎಂಬುದು ಎಂ.ಬಿ ಪಾಟೀಲ್ ರ ಪೂರ್ಣ ಹೆಸರು. 

ರಾಜಕೀಯ ಕೌಟುಂಬಿಕ ಹಿನ್ನಲೆ ಉಳ್ಳವರಾಗಿರುವ ಎಂ.ಬಿ ಪಾಟೀಲ್ ರು ಅವರ ತಂದೆ ಬಿ ಎಂ ಪಾಟೀಲ್ ಕೂಡ ಶಾಸಕರಾಗಿದ್ದವರು. ತಾಯಿ ಕಮಲಾಬಾಯಿ ಪಾಟೀಲ್, ಸಹೋದರ ಸುನಿಲಗೌಡ ಪಾಟೀಲ್ ವಿಧಾನ ಪರಿಷತ್ ಸದಸ್ಯ, ಇವರಿಗೆ ನಂದಾ, ಕಲ್ಪನಾ ಹಾಗೂ ಸವಿತಾ ಮೂವರು ಸಹೋದರಿಯರಿದ್ದಾರೆ. ಬಿಇ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಎಂ ಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್. ಈ ದಂಪತಿಗೆ ಬಸನಗೌಡ ಪಾಟೀಲ್ ಹಾಗೂ ದ್ರುವ ಪಾಟೀಲ್ ಇಬ್ಬರು ಪುತ್ರರಿದ್ದಾರೆ.


ಗ್ಯಾರಂಟಿ' ಎಫೆಕ್ಟ್ : ಬಿಪಿಎಲ್ ಕಾರ್ಡ್ ಗೆ ಮುಗಿಬಿದ್ದ ಜನ: ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ !!



2012ರಿಂದ 1028ರಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿ ಸೇವೆ :

ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ, ಅಣೆಕಟ್ಟುಗಳ, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮತಾಳ ಸೂಕ್ಷ್ಮ ನೀರಾವರಿ ಯೋಜನೆ, ಮೇಕೆದಾಟು, ಎತ್ತಿನಹೊಳೆ, ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ ಬಬಲೇಶ್ವರ ಏತನೀರಾವರಿ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು, ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಿರುವ ಎಂ ಬಿ ಪಾಟೀಲ್, 2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ತಿಂಗಳುಗಳ ಕಾಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು.

ಉಕ್ರೇನ್ ನಿಂದ ಮರಳಿದ 17 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ :

     
ಉಕ್ರೇನ್ ನಿಂದ ಮರಳಿದ 17 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದ್ದರು. 

ನಿರಂತರ ಕೆಲಸ ಮಾಡುವ ಪೊಲೀಸ್ ಸಿಬ್ಬಂಧಿ ಕಲ್ಯಾಣಕ್ಕಾಗಿ ಔರಾದ್ಕರ್ ಸಮಿತಿಯ ವರದಿಯನ್ನು ಜಾರಿಗಾಗಿ ಪ್ರಯತ್ನಿಸಿದರೂ. ಹೌದು ಔರಾದ್ಕರ್ ವರದಿ ಪ್ರಕಾರ ಪೊಲೀಸ್ ಸಿಬ್ಬಂದಿಯ ವೇತನದಲ್ಲಿ ಹೆಚ್ಚಳ, ಬಡ್ತಿ ಹಾಗೂ ಇನ್ನಿತರ ಬದಲಾವಣೆಗಳನ್ನು ತರಲು ಔರಾದ್ಕರ್ ವರದಿ ಜಾರಿಗೆ ಶಿಫಾರಸ್ಸು ಮಾಡಿದ್ದರು. 

ಗೃಹ ಸಚಿವರಿಗೆ ನೀಡಲಾಗುತ್ತಿದ್ದ ಜೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಣೆ ಮಾಡಿದ್ದರು.

ಪೊಲೀಸ್ ವಂದನೆ ಸಂಸ್ಕೃತಿಯನ್ನು ನಿಲ್ಲಿಸಿದ್ದರು.

ಇವರ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಬದ್ಧತೆಗಳಿಂದಾಗಿ ಬಸವಶಾಂತಿ, ಆಧುನಿಕ ಭಗೀರಥ, ಮೃತ್ಯುಂಜಯ ಪ್ರಶಸ್ತಿ ಬಿ.ಡಿ ಜತ್ತಿ ಸ್ಮಾರಕ ಪ್ರಶಸ್ತಿ, ಪರ್ಯಾವರಣ ರಕ್ಷಕ ಸಮ್ಮಾನ - 2019 ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರದ ಡಿ ವೈ ಪಾಟೀಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು